ಮಂಡ್ಯ

ಮುಂದಿನ ಚುನಾವಣೆಗೂ ಸುರೇಶ್ ಗೌಡರೇ ಜೆಡಿಎಸ್ ಅಭ್ಯರ್ಥಿ: ನಿಖಿಲ್ ಕುಮಾರಸ್ವಾಮಿ..!

Published

on

ನಾಗಮಂಗಲ: ಜೆಡಿಎಸ್ ಭದ್ರಕೋಟೆಯೆಂದೇ ರಾಜ್ಯಾದ್ಯಂತ ಬಿಂಬಿತವಾಗಿರುವ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ವಿಷಯದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಹಾಗೂ ಶಾಸಕ ಸುರೇಶ್ ಗೌಡರ ವಿಭಿನ್ನ ಹೇಳಿಕೆಗಳ ಮೂಲಕ ಗೊಂದಲದಲ್ಲಿದ್ದ ಕಾರ್ಯಕರ್ತರಿಗೆ ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾಗಮಂಗಲ. ವಿಧಾನಸಭಾ ಕ್ಷೇತ್ತದ ಅಭ್ಯರ್ಥಿ ಹಾಲಿ ಶಾಸಕರಾದ ಸುರೇಶ್ ಗೌಡರೆ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಳೆದ ಕೆಲವು ದಿನಗಳಿಂದಿದ್ದ ಅಭ್ಯರ್ಥಿ ವಿಷಯಕ್ಕೆ ಸ್ಪಷ್ಟೀಕರಣ ನೀಡಿದರು.ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ಸಮೀಪ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿಖಿಲ್ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದ ಅವರು, ಕುಟುಂಬ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯಿಸಿ, ಕುಟುಂಬ ರಾಜಕಾರಣ ಜೆಡಿಎಸ್ ಗೆ ಮಾತ್ರ ಸೀಮಿತವಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪನ ಇಬ್ಬರು ಮಕ್ಕಳಿಲ್ಲವೇ, ಸಿದ್ದರಾಮಯ್ಯನ ಮಕ್ಕಳು ರಾಜಕೀಯದಲ್ಲಿ ಇಲ್ಲವೇ, ಎಲ್ಲಾ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ಇದೆ. ನನಗೆ ರಾಮನಗರ ಮತ್ತು ಮಂಡ್ಯ ಎರಡು ಮುಖ್ಯವೇ. ರಾಮನಗರ ಬೇರೆ ಅಲ್ಲ ಮಂಡ್ಯ ಬೇರೆ ಅಲ್ಲ. ನನಗೆ ಅಧಿಕಾರದ ಹುಚ್ಚು ಇದ್ದಿದ್ರೆ ೧೦ ವರ್ಷದ ಹಿಂದೆಯೇ ಶಾಸಕ ಆಗ್ತಿದ್ದೆ. ಕುಮಾರಸ್ವಾಮಿ ಅವರ ಹೆಸರೇಳಿಕೊಂಡು ಎಷ್ಟೊಂದು ಜನ ಶಾಸಕರಾಗಿದ್ದಾರೆ, ನನಗೆ ಆರೀತಿಯ ಅಧಿಕಾರದ ಹುಚ್ಚಿಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.ಈ ಸಂದರ್ಭ ಶಾಸಕ ಸುರೇಶ್ ಗೌಡ, ನೆಲ್ಲಿಗೆರೆ ಬಾಲು, ಮನ್ಮುಲ್ ನಿರ್ದೇಶಕ ಕೋಟಿರವಿ ಸೇರಿದಂತೆ ಮತ್ತಿತರರು ಇದ್ದರು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version