ನಂಜನಗೂಡು: ನಂಜನಗೂಡಿನ ಹಳೆ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಗ್ರಾಮೀಣ ಅಂಚೆ ನೌಕರರು ಹಾಗೂ ಸಿಬ್ಬಂದಿಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಪ್ರತಿಭಟನೆಯನ್ನು ಮಾಡಲಾಯಿತು. ಕೇಂದ್ರ ಸರ್ಕಾರವು ಗ್ರಾಮೀಣ ಅಂಚೆ ನೌಕರರನ್ನು ಖಾಯಂ ನೌಕರರೆಂದು ಘೋಷಿಸಬೇಕು, ಇದುವರೆಗೂ ತಡೆಹಿಡಿದಿರುವ ತುಟ್ಟಿಭತ್ತೆಯನ್ನು ಬಿಡುಗಡೆಗೊಳಿಸಬೇಕು, ಜಿಡಿಎಸ್ ನೌಕರರಿಗೆ ಹಬ್ಬದ ಮುಂಗಡ ಹಣ ಹತ್ತು ಸಾವಿರ ರೂ ಗಳನ್ನು ನೀಡಬೇಕೆಂದು ಇನ್ನೂ ಅನೇಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಾಲ್ಲೂಕು ಅಂಚೆ ಕಚೇರಿಯ ಸೂಪರಿಡೆಂಟ್ ಸದಾನಂದ ಕೊಪ್ಪ ಎಂಬವರಿಗೆ ಮನವಿ ಪತ್ರ ಸಲ್ಲಿಸಿದರು. ಇನ್ನೂ ಈ ಸಂಧರ್ಭದಲ್ಲಿ ತಾಲ್ಲೂಕು ಗ್ರಾಮೀಣ ಅಂಚೆ ನೌಕರರ ವಿಭಾಗೀಯ ಅಧ್ಯಕ್ಷ ಸುಬ್ಬಣ್ಣ ಖಜಾಂಚಿ ಶಿವಣ್ಣ ಹುಲ್ಲಹಳ್ಳಿ ಚಿನ್ನಸ್ವಾಮಿ ಇನ್ನೂ ನೂರಾರು ಸಿಬ್ಬಂದಿಗಳು ಹಾಜರಿದ್ದರು
ವರದಿ-ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು