ಬೆಂಗಳೂರು

ತೆರೆ ಮೇರೆ ಬರೋದಕ್ಕೆ ರೆಡಿಯಾಗ್ತಿದೆ ಮುತ್ತಪ್ಪ ರೈ ಜೀವನಾಧಾರಿತ ಚಿತ್ರ..!

Published

on

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಹೆಸರಲ್ಲಿ ಸಿನಿಮಾ ಬರ್ತಿದೆ ಅನ್ನೋ ಬಗ್ಗೆ ಕಳೆದ ಒಂದೆರಡು ವರ್ಷಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ಅದರಲ್ಲೂ ಅವರ ನಿಧನದ ಬಳಿಕ ಆ ಸುದ್ದಿ ಜೋರಾಗಿ ಕೇಳಿ ಬರುತ್ತಿತ್ತು. ಇದೀಗ ಈ ನ್ಯೂಸ್ ಪಕ್ಕಾ ಆಗಿದೆ. ಹೌದು.. ಮುತ್ತಪ್ಪ ರೈ ಅವರ ಜೀವನಾಧಾರಿತ ಸಿನಿಮಾ ಮಾಡೋದಕ್ಕೆ ನಿರ್ದೇಶಕ ರವಿ ಶ್ರೀವತ್ಸ ಅವರು ಮುಂದಾಗಿದ್ದಾರೆ. ಇದೀಗ ಸಿನಿಮಾದ ಫೋಟೋ ಶೂಟ್ ಕೂಡ ನಡೆದಿದೆ. ರಾಮನಗರ ತಾಲೂಕಿನ ಶಿಲ್ದಾಂದರ್ ನಲ್ಲಿ ಚಿತ್ರದ ಫೋಟೋ ಶೂಟ್ ಮಾಡಲಾಗಿದೆ. ಇನ್ನು ಸಿನಿಮಾಗೆ ಎಂಆರ್ ಎಂಬ ಟೈಟಲ್ ಫಿಕ್ಸ್ ಆಗಿದೆ. ಅಂದ್ಹಾಗೆ ಈ ಸಿನಿಮಾವನ್ನು ಶೋಭಾ ರಾಜಣ್ಣ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರ ಪುತ್ರ ದಿಕ್ಷೀತ್ ಸಿನಿಮಾದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗೆ ಗುರುಕಿರಣ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ವಿಕ್ರಮ್ ಸಾಹಸ ನಿರ್ದೇಶನ ಮಾಡಲಿದ್ದಾರೆ. ಇನ್ನು ಈ ಸಿನಿಮಾದ ಮೂಲಕ ಮುತ್ತಪ್ಪ ರೈ ಅವರ ಬಗ್ಗೆ ಜನ ಸಾಮಾನ್ಯರಿಗೆ ಗೊತ್ತಿಲ್ಲದ ಅನೇಕ ವಿಚಾರಗಳನ್ನು ಹೇಳಲಿದ್ದಾರಂತೆ ರವಿ ಶ್ರೀವತ್ಸ. ಅಂದ್ಹಾಗೆ ಎಂಆರ್ ಹೆಸರಿನಲ್ಲಿ ಈ ಸಿನಿಮಾವನ್ನು ಮೂರು ಭಾಗವಾಗಿ ನಿರ್ಮಿಸುವ ತಯಾರಿಯಲ್ಲಿದೆ ಚಿತ್ರ ತಂಡ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version