ವೇಸ್ಟ್ ಗ್ರೈಂಡರ್ ಮಿಷನ್ ಸಿಲುಕಿ ಯುವಕನೊಬ್ಬ ಸಾವನ್ನಪಿದ್ದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಕೋದೇನಕೊಪ್ಪಲು ಗ್ರಾಮದ ಬಳಿ ನಡೆದಿದೆ. ಬಿಹಾರ ಮೂಲದ ಸುಜೀತ್( 22)ಮೃತಪಟ್ಟ ದುರ್ದೈವಿ. ಇನ್ನೂ ಸುಜೀತ್ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕೋದೇನ ಕೊಪ್ಪಲು ರಸ್ತೆಯಲ್ಲಿರುವ ಜಿಯಾ ಉಲ್ಲಾ ಖಾನ್ ಘೋರಿಯ ಸ್ಟಾರ್ ಮಿಲ್ ಗೆ ಕೆಲಸಕ್ಕೆ ಸೇರಿದ್ದ. ಇಂದು ಕರೆಂಟ್ ಹೋಗಿದ್ದಾಗ ಮಾಲೀಕ ಮಿಷನ್ ನಲ್ಲಿರುವ ಡೆಸ್ಟ್ ತೆಗೆಯಲು ಸುಜೀತ್ ಸೂಚಿಸಿದ್ದು ಡೆಸ್ಟ್ ತೆಗೆಯುವ ಸಂದರ್ಭ ದಿಡೀರ್ ಕರೆಂಟ್ ಬಂದಿದೆ. ಆಗ ಮಿಷನ್ ಆನ್ ಯಾಗಿ ಸುಜೀತ್ ಮಿಷನ್ ಗೆ ಸಿಕ್ಕಿಕೊಂಡಿದ್ದಾನೆ. ಆತನ ಕೈ ಕಾಲು ಸೇರಿದಂತೆ ಹಲವು ಕಡೆ ಗಾಯಗಳಾಗಿವೆ. ತಕ್ಷಣ ಮಿಷನ್ ಆಪ್ ಮಾಡಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾಗಿ ಸುಜೀತ್ ಸಾವನ್ನಪ್ಪಿದ್ದಾನೆ. ಇನ್ನೂ ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಪೃಥ್ವಿ , ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಧನರಾಜ್, ಕಿರುಗಾವಲು ಸಬ್ ಇನ್ಸ್ ಪೆಕ್ಟರ್ ಮಲ್ಲಪ್ಪ ಭೇಟಿ ಪರಿಶೀಲನೆ ನಡೆಸಿದ್ದಾರೆ, ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ-ಎ.ಎನ್ ಲೊಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ