ಮಳವಳ್ಳಿ: ಜಯಕರ್ನಾಟಕ ಸಂಘಟನೆ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭವನ್ನು ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆಸಲಾಯಿತು.ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ರಾಧ ನಾಗರಾಜು, ಉದ್ಘಾಟಿಸಿದರು. ಇನ್ನೂ ಪುರಸಭೆ ಉಪಾಧ್ಯಕ್ಷ ನಂದಕುಮಾರ ಮಾತನಾಡಿ ,ಸಂಘಟನೆಗಳಿಂದ ಕನ್ನಡ ಉಳಿಸಲು ಹೋರಾಟ ನಡೆಯುತ್ತಾ ಬಂದಿದೆ ಎಂದರು. ಇನ್ನೂ ಕನ್ನಡ ಭಾಷೆಗೆ 8 ಮಂದಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಿದ್ದು ಹೆಮ್ಮಯ ಸಂಗತಿ ಎಂದರು. ಕನ್ನಡ ಮತ್ತಷ್ಟು ಬೆಳೆಯಲು ನಾವೆಲ್ಲೂ ಹೋರಾಟ ಮಾಡೋಣ ಎಂದರು.ಇನ್ನೂ ಕೋರೋನಾ ವಾರಿಯಸ್೯ಗಳಾದ ತಾಲ್ಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ,ತಹಸೀಲ್ದಾರ್ ಚಂದ್ರಮೌಳಿ, ಚೆಸ್ಕಾಂ ಎಇಇ ಪ್ರೇಮಕುಮಾರ್,ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ. ನಾಗೇಶ್, ಉಪತಹಸೀಲ್ದಾರ್ ಮತ್ತು ಕರ್ನಾಟಕ ರಾಜ್ಯ ರಕ್ಷಣಾ ಪಡೆ ತಾಲ್ಲೂಕು ಅಧ್ಯಕ್ಷ ನಟರಾಜು, ಟಿಎಪಿಸಿಎಂಎಸ್ ನಿರ್ದೇಶಕ ರಾಜೇಶ್,ಪುರಸಭೆ ಸದಸ್ಯರುಗಳಾಧ ಸಿದ್ದರಾಜು,ಪ್ರಶಾಂತ್, ನೂರಲ್ಲಾ , ಕುಮಾರ,ಸೇರಿದಂತೆ ಮತ್ತಿತ್ತರರು ಇದ್ದರು
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ