ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ 65ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.ಶಾಸಕ ಡಿ.ಎಸ್ ಹೂಲಗೇರಿ ಧ್ವಜಾರೋಹಣ ಮಾಡಿ ಕನ್ನಡ ನಾಡು, ಜಲ, ಭಾಷೆ,ಗಡಿ ವಿಷಯ ಅಂತಾ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಹೋರಾಟ ಅವಶ್ಯವಾಗಿದೆ.ಅವರ ಹೋರಾಟಕ್ಕೆ ನಮ್ಮ ಬೆಂಬಲ ಕೂಡಾ ಇದೆ. ಮುಂದಿನ ದಿನಗಳಲ್ಲಿ ಮುದಗಲನ್ನು ತಾಲೂಕ ಮಾಡಲು ಪ್ರಯತ್ನ ಮಾಡುವೆ ಎಂದರು.
ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು