ಮಂಡ್ಯ

ವಿಶ್ವ ಕರ್ಮ ಸಮಾಜಕ್ಕೆ ನೀಡಿರುವ ಸವಲತ್ತು ಸಾಲದು- ಬಾಬುಪತ್ತರ್..!

Published

on

ಮಳವಳ್ಳಿ: ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಶ್ವಕರ್ಮ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಹಾಗೂ ಸಮಾಜ ಮುಖಂಡರುಗಳನ್ನು ,ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು. ಬಳಿಕ ಮಾತನಾಡಿದ ವಿಶ್ವಕರ್ಮ ಅಭಿವೃದ್ದಿ ನಿಗಮ ಮಂಡಳಿ ಅದ್ಯಕ್ಷ ಬಾಬುಪತ್ತರ್ , ಸಮಾಜಕ್ಕಾಗಿ ಸಾಕಷ್ಟು ಯೋಜನೆಗಳು ಈಗಾಗಲೇ ಜಾರಿಗೆಯಾಗಿದ್ದು, ಸಮಾಜದ ಕೊನೆ ಮಟ್ಟದ ವ್ಯಕ್ತಿಗೂ ಸಿಗುವ ರೀತಿ ಮಾಡುತ್ತೇನೆ ಎಂದರು. ಜೊತೆಗೆ ವಿಶ್ವಕರ್ಮ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮಾತನಾಡಿ , ಸಮಾಜ ಸಾಕಷ್ಟು ಹಿಂದುಳಿದ್ದು, ಪ್ರತಿಜಿಲ್ಲೆಗೂ 10 ಕೋಟಿ ರೂಪಾಯಿಯಂತೆ 300 ಕೋಟಿ ರೂ ಅನುದಾನ ನೀಡಬೇಕು, ಇದರಿಂದ ಸಮಾಜ ಅಭಿವೃದ್ಧಿ ಗೆ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗೆ ಒತ್ತಾಯಿಸಿದರು. ಇನ್ನೂ ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜ ಸೇವಾ ಟ್ರಸ್ಟ್ ಜಿಲ್ಲಾದ್ಯಕ್ಷ ಸತೀಸ್, ರಮೇಶ್, ಎಸ್ ವಿ ಕಾಂತರಾಜು,ಯುವಘಟಕ ಅಧ್ಯಕ್ಷ ಸತೀಸ್ , ಸಿದ್ದಚಾರಿ ಸೇರಿದಂತೆ ಮತ್ತಿತ್ತರರು ಇದ್ದರು

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version