ಹುಬ್ಬಳ್ಳಿ: ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ಇಂದು ಹುಬ್ಬಳ್ಳಿ ಸಿದ್ದರೂಡರ ಮಠಕ್ಕೆ ಹಾಗೂ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಅವರ ನಿವಾಸಕ್ಕೆ ಬೇಟಿ ನೀಡಿ ಆರ್ಶೀವಾದ ಮಾಡಿದರು.ಉತ್ತರ ಕರ್ನಾಟಕ ಪ್ರಸಿದ್ಧ ಸಿದ್ದರೂಡರ ಮಠಕ್ಕೆ ಬೇಟಿ ನೀಡಿ ನಂತರ ಭಕ್ತರಿಗೆ ಆರ್ಶೀವಾದ ಮಾಡಿದರು. ನಂತರ ಮಾತನಾಡಿದ ಅವರು, ಆರೋಗ್ಯಪೂರ್ಣ ಸಮಾಜಕ್ಕೆ ಸಿದ್ದಾರೂಡರ ಆದರ್ಶ ಚಿಂತನೆಗಳು ಸಕಲರ ಬಾಳಿಗೆ ದಾರಿದೀಪ ಎಂದು ನಂಬಿ ನಡೆಯುವ ಶ್ರೇಷ್ಠ ಸಾಧಕರು ಭೂತ ವರ್ತಮಾನ, ಭವಿಷ್ಯ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಆಶಿಸುವ ಸಂತ ಶ್ರೇಷ್ಠರು. ಉತ್ತರ ಕರ್ನಾಟಕ ಭಾಗದ ಜನತೆ ಎಲ್ಲರಿಗೂ ಪಾಠದ ಜೊತೆಗೆ ಜ್ಞಾನ ಬೇಕು ನೀಡುವು ಶ್ರೀಮಂತಿಕೆ ಉಳ್ಳವರು, ನಮಗೂ ಹುಬ್ಬಳ್ಳಿಗೂ ಅವಿನಾಭಾವ ನಂಟು ಇದೆ ಎಂದರು. ಇನ್ನೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿರುವುದರ ಬಗ್ಗೆ ಭವಿಷ್ಯ ನುಡಿದ ಅವರು ಅವರ ಮೇಲೆ ದೇವರ ಆರ್ಶಿವಾದ ಇದೆ.ನಾನು ಭವಿಷ್ಯ ನಂಬುವುದಿಲ್ಲ, ಸದ್ಯ ಏನು ನಡೆಯುತ್ತದೆ ಅದು ಹೇಳಿತ್ತೆನೆ,ಎಂದರು.ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಮದುವೆಗೆ ಶುಬನ ಹಾರೈಸಿದರು..
ವರದಿ- ರಾಜುಮುದಿಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ