ಲಿಂಗಸೂಗೂರು: ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಹೆಸರೂರು ಬಳಿ ನಡೆದಿದೆ. ಆಂಬುಲೆನ್ಸ್ ನಲ್ಲಿದ್ದ ಸ್ಟಾಫ್ ನರ್ಸ್ ಸಂಗಮೇಶ ಮೃತ ಪಟ್ಟಂತಹ ದುರ್ಧೈವಿಯಾಗಿದ್ದು, ಆಂಬುಲೆನ್ಸ್ ಚಾಲಕ ಹನುಮಪ್ಪನಿಗೆ ಸಣ್ಣ ಪುಟ್ಟ ಗಾಯವಾಗಿದೆ. ಲಿಂಗಸೂಗೂರಿನಿಂದ ಪಾಮನಕಲ್ಲೂರಿಗೆ ರೋಗಿಯನ್ನ ಕರೆತರಲು ಹೋಗುವಾಗ ಈ ದುರ್ಘಟನೆ ನಡೆದಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಡ್ರೈವರ್ ಇಂಡಿಕೇಟರ್ ಹಾಕದೇ ಇರುವುದೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ವರದಿ-ವಿರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು