ಲಿಂಗಸೂಗೂರು: ಸಮಾಜ ಸುಧಾರಕ,ಭಾರತ ರತ್ನ,ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 64 ನೇ ಪುಣ್ಯ ಸ್ಮರಣೆಗಾಗಿ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಿಜೆಪಿ ಕಾರ್ಯಲಯದಲ್ಲಿ Sc ಯುವ ಮೋರ್ಚಾದ ವತಿಯಿಂದ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಲಾಯಿತು. ಪಟ್ಟಣದ ಬೈ ಪಾಸ್ ರಸ್ತೆ ಬುದ್ದಿನ್ನಿ ಆಸ್ಪತ್ರೆ ಎದುರಿಗಿರುವ ಪುರಸಭೆ ಉದ್ಯಾನವನದಲ್ಲಿ ದಲಿತ ಸಂರಕ್ಷ ಸಮಿತಿ ತಾಲೂಕು ಘಟಕದ ವತಿಯಿಂದ ಘಟಕದ ಅಧ್ಯಕ್ಷ ಮೋಹನ್ ಗೋಸ್ಲೆ ರವರ ನೇತೃತ್ವದಲ್ಲಿ ಬಾಬಾ ಸಾಹೇಬರ ಮೂರ್ತಿಗೆ ಹೂ ಮಾಲೆ ಹಾಕುವ ಮೂಲಕ ಮಹಾ ಪರಿನಿರ್ವಾಣ ದಿನವನ್ನು ಆಚರಿಸಿದರು.ಇನ್ನೂ ನಾಗರಹಾಳ ಗ್ರಾಮದ ಸಂತೇಬಜಾರ್ ದಲ್ಲಿರುವ ಅಂಬೇಡ್ಕರ್ ರವರ ಪುತ್ಥಳಿಗೆ ಅಂಬೇಡ್ಕರ್ ಸೇನೆಯ ಅಧ್ಯಕ್ಷರು ಹಾಗೂ ಸದಸ್ಯರು ಪುಷ್ಪ ನಮನಗಳನ್ನು ಸಲ್ಲಿಸಿದರು.ಪುರಸಭೆ ಉದ್ಯಾನವದ ಮಹಾ ಪರಿನಿರ್ವಾಣ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ PSI ಪ್ರಕಾಶ್ ರೆಡ್ಡಿ ಡಂಬಳ್ ಮಾತನಾಡಿ, ಮಾಡಿ.ಅಂಬೇಡ್ಕರ್ ರವರ ತತ್ವ ಸಿದ್ದಾಂತಗಳನ್ನು ತಿಳಿದುಕೊಂಡು ಸಂಘಟನೆ ಮಾಡಿ.ಜನರಿಗೆ ಏನು ಸಂದೇಶ ಕೊಡಬೇಕೋ ಅದನ್ನು ಮಾಡಿ. ನೀವೂ ಮಾಡಿದ ಕಾರ್ಯ ಇತಿಹಾಸವಾಗುಂತೆ ಮಾಡಿ ಎಂದು ಹೇಳಿದರು.
ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು