ಹುಬ್ಬಳ್ಳಿ; ಕೇಂದ್ರ ಸರ್ಕಾರದ ರೈತ ವಿರೋಧಿಸಿ ಕಾನೂನು ವಿರೋಧಿಸಿ ಭಾರತ್ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ಸರ್ಕಲ್ ಬಳಿ ಕನ್ನಡ ಪರ ಹೋರಾಟಗಾರ ಬಸ್ ಮುಂದೆ ಮಲಗಿ ಪ್ರತಿಭಟನೆ ಮಾಡಿದರು. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಂದ ಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಏಕಾಂಗಿಯಾಗಿ ಬಸ್ ತಡೆದು ಪ್ರತಿಭಟನೆ ನಡೆಸಿದರು.ಇನ್ನೂ ಕೂಡಲೇ ರೈತರಿಗೆ ಮಾರಕವಾದ ಮಸೂದೆ ವಾಪಾಸ್ ಪಡೆಯುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ಇದೇ ವೇಳೆ ಬಸ್ ತಡೆದು ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರ ಹಾಗೂ ಪೋಲಿಸರ ನಡುವೆ ಕೆಲವೊತ್ತು ವಾಗ್ವಾದ ನಡೆಯಿತು. ಒತ್ತಾಯದ ಪೂರಕವಾಗಿ ಬಸ್ ಸಂಚಾರ ಹಾಗೂ ಹೋಟೆಲ್ ಗಳನ್ನು ಬಂದ್ ಮಾಡದಂತೆ ಪೊಲೀಸರು ತಿಳಿ ಹೇಳಿದ್ರು.
ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ