ಮಳವಳ್ಳಿ: ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ಆಡಳಿತ ಮಂಡಳಿಯ ಸದಸ್ಯರ ಸಭೆಯನ್ನು ಮಳವಳ್ಳಿ ತಾಲ್ಲೂಕಿನ ದೊಡ್ಡ ಬೂವಳ್ಳಿ ಬಳಿರುವ ಕಚೇರಿ ಆವರಣದಲ್ಲಿ ನಡೆಸಲಾಯಿತು. ಇನ್ನೂ ಮಳವಳ್ಳಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಜಗದೀಶ್ರವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಸಭೆಯಲ್ಲಿ ಉಪಾಧ್ಯಕ್ಷ ಡಾ.ನಾಗರಾಜು, ಮಾತನಾಡಿ, ಅಧ್ಯಕ್ಷರು ಅಕ್ರಮವಾಗಿ ಅವರ ಮನೆಯಲ್ಲಿ ಗೊಬ್ಬರಗಳನ್ನು ಶೇಖರಣೆ ಮಾಡಿದ್ದಾರೆ. ರೈತರ ಹಣ ದುರುಪಯೋಗ ಮಾಡಿದ್ದಾರೆ ಅಧ್ಯಕ್ಷರು ರಾಜೀನಾಮೆ ನೀಡುಬೇಕೆಂದು ಪಟ್ಟು ಹಿಡಿದರು. ಇನ್ನೂ ಸಭೆಯಲ್ಲಿ ನೂತನ ಸಿಇಓ ನೇಮಕಾತಿಯ ಬಗ್ಗೆ ಕೂಡ ಚರ್ಚಿಸಲಾಯಿತು. ಡಿಸೆಂಬರ್ ಅಂತ್ಯದೊಳಗೆ ಸಾಮಾನ್ಯ ಸರ್ವ ಸದಸ್ಯರ ಸಭೆ ನಡೆಸಲು ತೀರ್ಮಾನಿಸಲಾಯಿತು. ಇನ್ನೂ ಈ ಸಭೆಯಲ್ಲಿ ಉಪಾಧ್ಯಕ್ಷ ಡಾ.ನಾಗರಾಜು, ಮಾಜಿ ಅಧ್ಯಕ್ಷ ರವೀಗೌಡ, ಸಿದ್ದಯ್ಯ, ಸಿಇಓ ಸೂರಜ್ ಸೇರಿದಂತೆ ಮತ್ತಿತ್ತರರು ಭಾಗಿಯಾಗಿದ್ದರು,
ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ