ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕೊಲೆ ಪ್ರಕರಣಗಳು ಮೇಲಿಂದ ಮೇಲೆ ನಡೀತಾನೆ ಇದೆ. ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ವಾರದಲ್ಲಿ ಒಂದೆರಡು ಹೆಣಗಳು ಬೀಳ್ತಿದ್ದು, ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚೆಚ್ಚು ದಾಖಲಾಗ್ತಿವೆ. ಇಂದು ಕೂಡ ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನೈ ತಿಕ ಸಂಬಂಧಕ್ಕೆ ವ್ಯಕ್ತಿಯೋರ್ವನ ಕೊಲೆ ನಡೆದಿದ್ದು ಪೊಲೀಸ್ ಇಲಾಖೆ ಹೈರಾಣಾಗಿದೆ. ಸಕ್ಕರೆನಾಡು ಮಂಡ್ಯ ಇದೀಗ ಕ್ರೈಂ ನ ತವರೂರಾಗಿದೆ. ಅದ್ರಲ್ಲೂ ಕೊಲೆ ಪ್ರಕರಣಗಳು ಮೇಲಿಂದ ಮೇಲೆ ನಡೀತಾ ಇದೆ. ಇದು ಜಿಲ್ಲೆಯ ಪೊಲೀಸರಿಗೆ ತಲೆ ನೋವಾಗಿದೆ. ಇಂದು ಕೂಡ ಮಂಡ್ಯ ಜಿಲ್ಲೆಯ KRS ಪೊಲೀಸ್ ಠಾಣಾ ವ್ಯಾಪ್ತಿಯ ಮೊಗರಹಳ್ಳಿ ಮಂಟಿ ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ವ್ಯಕ್ತಿಯೋರ್ವ ಕೊಲೆ ನಡೆದಿದ್ದು, ತನ್ನ ತಾಯಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಸಂಬಂಧ ಇಟ್ಟು ಕೊಂಡ ಮಹಿಳೆಯ ಮಗ ಸೇರಿ ಮತ್ತೋರ್ವ ಕಲ್ಲಿನಿಂದ ಹೊಡೆದು ಸಾಯಿಸಿ ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ನಾಗ ರಾಜು(28) ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನು ಕೊಲೆಯಾದ ವ್ಯಕ್ತಿ ನಾಗರಾಜು ಮೂಲತಃ ಮೈ ಸೂರಿನವನಾಗಿದ್ದು ,ಹೆಂಡತಿ ತೊರೆದು ಮೊಗರಳ್ಳಿ ಮಂಟಿ ಗ್ರಾಮದಲ್ಲಿ ಮನೆಯೊಂದರಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದ. ಇದೇ ಗ್ರಾಮದ ಲಕ್ಷ್ಮಿ ಎಂಬಾಕೆ ಯನ್ನು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ.ನೆನ್ನೆ ಮನೆಯಲ್ಲಿ ದ್ದಾಗ ಆ ಮಹಿಳೆಯ ಜೊತೆ ಕ್ಷುಲ್ಲಕ ಕಾರಣಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಈ ವಿಚಾರವನ್ನು ಆ ಮಹಿಳೆ ತನ್ನ ಮಗನಿಗೆ ತಿಳಿಸಿದ್ದಳು. ಇದ್ರಿಂದ ಕುಪಿತಗೊಂಡ ಮಗ ಹಾಗೂ ಆತನ ಸ್ನೇಹಿತ ಇಬ್ಬರು ಸೇರಿಕೊಂಡು ತನ್ನ ತಾಯಿ ಮೇಲೆ ಹಲ್ಲೆ ನಡೆಸಿದ ನಾಗರಾಜು ಜೊತೆ ಜಗಳ ತೆಗದು ಒರಳು ಕಲ್ಲಿನಿಂದ ನಾಗರಾಜು ತಲೆಗೆ ಹೊಡೆದು ನಾಪತ್ತೆಯಾಗಿದ್ರು.ಘಟನೆಯಲ್ಲಿ ತೀವ್ರ ಗಾಯಗೊಂಡ ನಾಗರಾಜುನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಇನ್ನು ಈ ಸಂಬಂಧ KRS ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯದ ಬಗ್ಗೆ ಮಹಿಳೆಯಿಂದ ಮಾಹಿತಿ ಪಡೆದು ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿರೋ ಆ ಇಬ್ಬರು ಆರೋಪಿ ಯುವಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ವರದಿ-ಎಸ್.ವೆಂಕಟೇಶ್ ನಾಗಮಂಗಲ ಎಕ್ಸ್ ಪ್ರೆಸ್ ಟಿವಿ ಮಂಡ್ಯ.