ಪುಲ್ವಾಮ ಜಿಲ್ಲೆಯ ಟಿಕೆನ್ ವಲಯದಲ್ಲಿ ಅಡಗಿ ಕುಳಿತು ಕುಕೃತ್ಯ ಎಸಗಲು ಮುಂದಾಗಿದ್ದ ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ. ಬೆಳ್ಳಂಬೆಳಗ್ಗೆ ಪಾಕಿಸ್ತಾನ ಪೋಷಿತ ಉಗ್ರರನ್ನು ಭಾರತೀಯ ಸೇನೆ ಯಮಲೋಕಕ್ಕೆ ಅಟ್ಟಿದೆ. ಕಳೆದ ಕೆಲವು ತಿಂಗಳಿನಿಂದ ಪಾಕಿಸ್ತಾನ ಪೋಷಿತ ಉಗ್ರರು ,ಸೇನೆ ಹಾಗೂ ರಾಜಕೀಯ ಮುಖಂಡರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ.ಸದ್ಯ ಕಾರ್ಯಾಚರಣೆ ಮುಂದುವರೆದಿದ್ದು ಇನ್ನಷ್ಟು ಉಗ್ರರಿಗಾಗಿ ಹುಡುಕಾಟ ನಡೆಯುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಉಗ್ರರು ಕಣಿವೆ ರಾಜ್ಯದಲ್ಲಿ ಸಕ್ರಿಯರಾಗಿ ಪೊಲೀಸರು ಹಾಗೂ ರಾಜಕೀಯ ಮುಖಂಡರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇಂತಹ ಕುಕೃತ್ಯ ಎಸಗುವ ಉಗ್ರರಿಗೆ ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ತಕ್ಕ ಪಾಠ ಕಲಿಸುತ್ತಿದ್ದಾರೆ.
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು