ಲಿಂಗಸೂಗೂರು: ಆದಾಯ ಮತ್ತು ಜಾತಿ ಪ್ರಮಾಣಪತ್ರಕ್ಕಾಗಿ ರಾತ್ರಿಯಿಡೀ ತಹಶೀಲ್ದಾರ್ ಕಛೇರಿ ಮುಂದೆ ರಾಜಕೀಯ ಮುಖಂಡರು ಕಾದು ಕುಳಿತ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ. ನಾಮಪತ್ರ ಸಲ್ಲಿಸಲು ಅಗತ್ಯ ದಾಖಲೆಗಳು ಪಡೆಯಲು ತಹಶೀಲ್ದಾರ್ ಕಚೇರಿಗೆ ಅನೇಕ ಅಭ್ಯರ್ಥಿಗಳ ಬಂದಿದ್ದರು. ಆದ್ರೆ ಬೆಳಗ್ಗಿನಿಂದ ದ ಸಂಜೆವರೆಗೆ ಕಾದರೂ ಕಚೇರಿಗೆ ಅಧಿಕಾರಿಗಳು ಮಾತ್ರ ಬಂದಿರಲಿಲ್ಲ, ಇದರಿಂದ ರಾತ್ರಿ 8.30ರ ವರೆಗೆ ವಿವಿಧ ಗ್ರಾಮದ ಅಭ್ಯರ್ಥಿಗಳು ಕಾದು ಕುಳಿತಿದ್ದರು. ಆದೆರ ಅಧಿಕಾರಗಳ ಸುಳಿವಿರಲಿಲ್ಲ.ಇದರಿಂದ ಅಭ್ಯರ್ಥಿಗಳು ಗರಂ ಆದ್ರು.ಅಲ್ಲದೇ ಗ್ರಾಂ.ಪಂ.ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ 500 ರೂಪಾಯಿ ಕೊಟ್ಟರೆ ಇಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಿಗುತ್ತೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ವರದಿ-ವಿರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು