ಬಾಗಲಕೋಟೆ

ಅನೈತಿಕ ಸಂಬಂಧದ ಅನುಮಾನಕ್ಕೆ ನಡೆಯಿತು ಪತ್ನಿಯ ಕೊಲೆ..!

Published

on

ಬಾಗಲಕೋಟೆ: ಅನೈತಿಕ ಸಂಭಂದದ ಕಾರಣಕ್ಕಾಗಿ ಗಂಡ ಹೆಂಡತಿ ಮದ್ಯ ಜಗಳವಾಗಿದ್ದು,ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ದುರ್ದೈವಿ ಸುಮಿತ್ರಾ ಎಂದು ತಿಳಿದು ಬಂದಿದ್ದು, ಹತ್ಯೆಗೈದ ವ್ಯಕ್ತಿ ಹೆಸರು ಮಲ್ಲಪ್ಪ ಉಳ್ಳಾಗಡ್ಡಿ ಎಂದು ತಿಳಿದು ಬಂದಿದೆ. ಮಲ್ಲಪ್ಪ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ತನ್ನ ಪತ್ನಿ ಸುಮಿತ್ರಾ ಅದೇ ಗ್ರಾಮದ ಶ್ರೀಶೈಲ ಎಂಬುವವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂದು ಅನುಮಾನಿಸಿ ಶ್ರೀಶೈಲನನ್ನು ಕೊಲೆ ಮಾಡಲು ಯತ್ನಿಸಿದ್ದರು. ಇದರ ಬೆನ್ನಲ್ಲೇ ಮಲ್ಲಪ್ಪ ಪೋಲಿಸರ ಅತಿಥಿಯಾಗಿದ್ದು, ಕೆಲ ಕಾಲ ಜೈಲಿನಲ್ಲೂ ಮುದ್ದೆ ಮುರಿದು ಬಂದಿದ್ದ. ಜೈಲು ಪಾಲಾಗಲೂತನ್ನ ಹೆಂಡತಿಯೇ ಕಾರಣ, ಆಕೆ ಆತನ ವಿರುದ್ಧ ಕೋರ್ಟ್ ನಲ್ಲಿ ಸಾಕ್ಷೀ ಹೇಳಿದ ಕಾರಣ ಮಲ್ಲಪ್ಪ ಬೇಲ್ ತೆಗೆದುಕೊಂಡು ಬಂದು ಇಂದು ಬೆಳಗಿನ ಜಾವ ಮನೆಯ ಮುಂದಿರುವ ದನದ ಕೊಟ್ಟಿಗೆ ಹತ್ತಿರ ಇದ್ದ ಗುದ್ದಲಿಯಿಂದ ರಭಸವಾಗಿ ಸುಮೀತ್ರಾಳ ಮುಖಕ್ಕೆ ಹಾಗೂ ತಲೆಗೆ ಹೊಡೆದು ಕೊಲೆ ಮಾಡಿ ಪತಿ ಮಲ್ಲಪ್ಪ ಉಳ್ಳಾಗಡ್ಡಿ ಪರಾರಿಯಾಗಿದ್ದಾನೆ. ಇನ್ನೂ ವಿಚಯ ತಿಳೀಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಠಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ವರದಿ-ಶ್ಯಾಮ್ ತಳವಾರ್ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Click to comment

Trending

Exit mobile version