ಸಿರವಾರ: ರಾಯಚೂರ ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ಪಕ್ಕದ ಗ್ರಾಮವಾದ ಆಮಿನಗಡನಲ್ಲಿ ಇಂದು ಅನ್ನದಾತರು ಗ್ರಾಮ ಪಂಚಾಯಿತಿ ಮುಂದೆ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಿಸಿ ಸರ್ಪ ಗಾವಲು ಹಾಕಿ ಕುಳಿತಿದ್ದು, ಕೋಟೆಕಲ್ , ಕಾಚಾಪುರ, ಯತಗಲ್, ನಳ ಕೊಳ್, ಗ್ರಾಮದ ರೈತರು ಹೋರಾಟಕ್ಕೆ ಬೆಂಬಲಿಸಿದ್ದಾರೆ. ಇನ್ನು ನಾರಾಯಣ ಪುರ ಬಲ ದಂಡೇ ಕಾಲುವೆ ಯೋಜನೆ ಜಾರಿಗೆ ಆಗುವವರೆಗೆ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದಿದ್ದಾರೆ. ಇಂದಿಗೆ ನಾರಾಯಣ ಪುರ ಬಲ ದಂಡೇ ಕಾಲುವೆ ರೈತರ ಧರಣಿ 22 ದಿನಗಳನ್ನು ಪೂರೈಸಿದ್ದು, ಅಮಿನಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಹಳ್ಳಿಗಳ ಜನರು ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ. ಇದುವರೆಗೆ ಯಾರು ಕೂಡ ನಾಮಿನೇಷನ್ ಕೊಟ್ಟಿಲ್ಲವೆಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ವರದಿ- ಸುಲ್ತಾನ್ ಬಾಬು ಎಕ್ಸ್ ಪ್ರೆಸ್ ಟಿವಿ ಸಿರವಾರ