ಚಿಕ್ಕಬಳ್ಳಾಪುರ: ಬಟ್ಟೆ ಒಗೆಯಲು ಹೋದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಇಬ್ಬರ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಟಗಲ್ ಗ್ರಾಮದ ಬಳಿ ನಡೆದಿದೆ. ಕೋಟಗಲ್ ಗ್ರಾಮದ ವೆಂಕಟರಾಜು ಮಗ ಗಗನ್ (9) ವರ್ಷ. ನಾದಿನಿ ಅನಿತ (25) ಮೃತ ದುರ್ದೈವಿಗಳು, ಬೆಂಗಳೂರಿನ ನಿವಾಸಿಯಾದ ಅನಿತ ರಜೆಯ ಹಿನ್ನಲೇ ಅಕ್ಕನ ಮನೆಗೆ ಬಂದಿದ್ದು ಇಂದು ಬಟ್ಟೆ ಒಗೆಯಲು ಗ್ರಾಮದ ಹೊರವಲಯದ ಕೆರೆಗೆ ಅಕ್ಕ ಹೇಮ ಜೊತೆ ಗಗನ್ ಹಾಗೂ ಅನಿತ್ ತೆರಳಿದ್ದಾರೆ. ಇನ್ನೂ ಬಟ್ಟೆ ಒಗೆಯುವ ವೇಳೆ ಕಾಲು ಜಾರಿ ಅನಿತ ಹಳ್ಳಕ್ಕೆ ಬಿದ್ದಿದ್ದು ನಂತರ ಕಾಪಾಡಲು ಗಗನ ಹಾಗೂ ಹೇಮ ಸಹಾಯಕ್ಕೆ ಹೋದ ವೇಳೆ ಇಬ್ಬರು ನೀರು ಪಾಲಾಗಿದ್ದಾರೆ. ನಂತರ ಸ್ಥಳೀಯರು ಸಹಾಯದಿಂದ ಹೇಮಾಳನ್ನು ದಡಕ್ಕೆ ಸಾಗಿಸಿದ್ದು ಪ್ರಾಣಪಾಯದಿಂದ ಪಾರಾಗಿದ್ದು ಗಗನ್ ಹಾಗೂ ಅನಿತಳನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಇನ್ನೂ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು, ತಹಸಿಲ್ದಾರ್ ಹನುಮಂತರಾಯಪ್ಪ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ