ಚಿಕ್ಕಬಳ್ಳಾಪುರ

ಶಿಡ್ಲಘಟ್ಟಕ್ಕೂ,ಚಿಕ್ಕಬಳ್ಳಾಪುರಕ್ಕೂ ನಾನೇ ಶಾಸಕ..!

Published

on

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ದೋಣಿ,ವಿಧಾನಪರಿಷತ್ ನಲ್ಲಿ ಅವಹೇಳನಕಾರಿ ಕೆಲಸ ಮಾಡಿ ಅವರ ಪಾಪದ ಕೊಳ ತುಂಬಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ. ಮಾಜಿ ಶಾಸಕ ಎಂ ರಾಜಣ್ಣ ಪರ ಗ್ರಾಮಪಂಚಾಯ್ತಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಡಾ ಕೆ ಸುಧಾಕರ್ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದ ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪನವಿರಗೆ ಪರೋಕ್ಷವಾಗಿ ಟಾಂಗ್ ಕೊಟ್ಡಿದ್ದಾರೆ ,ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ ವಿಧಾನಪರಿಷತ್ ನಲ್ಲಿ ಅವಹೇಳನಕಾರಿ ಕೆಲಸ ಮಾಡಿ ಭಾರತ ದೇಶದ ಪ್ರಜೆ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ ಆದ್ದರಿಂದ , ಮಾಜಿ ಶಾಸಕ ಎಂ ರಾಜಣ್ಣ ಪರ ಬ್ಯಾಟಿಂಗ್ ಮಾಡಿದ್ದು , ಶಿಡ್ಲಘಟ್ಟದಲ್ಲಿ ಶಾಸಕರಿಲ್ಲ ಅಂತ ತಿಳಿದುಕೊಳ್ಳಬೇಡಿ,ರಾಜಣ್ಣ ಶಾಸಕರಾಗುವವರೆಗೂ ಶಿಡ್ಲಘಟ್ಟ ತಾಲ್ಲೂಕಿಗೂ ನಾನೇ ಶಾಸಕ ಹಾಗು ಚಿಕ್ಕಬಳ್ಳಾಪುರಕದಕೂ ನಾನೇ ಶಾಸಕ ಎಂಬ ಹೇಳಿಕೆಯನ್ನು ಕೊಡುವುದರ ಮೂಲಕ ತನ್ನ ರಾಜಕೀಯ ವೈರಿ ವಿ ಮುನಿಯಪ್ಪನವರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ .

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version