ಯಾದಗಿರಿ: ಸರ್ವಸ್ವ ತೊರೆದು ಜೈನ ಸಾಧ್ವಿ ದೀಕ್ಷೆ ಪಡೆಯಲು 21 ವರ್ಷದ ಯುವತಿ ಯಶೀತಾ ಎಂಬಾಕೆ ಮುಂದಾಗಿದ್ದು, ನಿನ್ನೇ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಲಾಯಿತು.ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಯಶೀತಾ ಕೋಟ್ಯಧೀಶ ಆಗಿರುವ ದೀಪಕ್ ಕುಮಾರ ಮತ್ತು ಮೀನಾಕುಮಾರಿ ದಂಪತಿಗೆ ಇಬ್ಬರು ಮಕ್ಕಳೂ ಒಂದು ಗಂಡು, ಮತ್ತೊಂದು ಹೆಣ್ಣು ಆಕೆಯೇ ಯಶೀತಾ, ಸನ್ಯಾಸತ್ವ ಪಡೆಯುವ ಮುನ್ನ ಲೋಕ ಸಂಚಾರ ಮಾಡುವುದು ವಾಡಿಕೆಯಿದೆ. ಇದಕ್ಕಾಗಿಯೇ ಅವರು ನಗರಕ್ಕೆ ಆಗಮಿಸಿದ್ದರು. ಬಹಳ ವಿಜೃಂಭಣೆಯಿಂದ ಸಾರೋಟಿನಲ್ಲಿ ಮೆರವಣಿಗೆ ಮಾಡಿ, ಮೆರವಣಿಗೆಗೂ ಮುಂಚೆ ಯುವತಿಯ ಹಸ್ತದಿಂದಲೇ ದವಸಧಾನ್ಯ ಸೇರಿದಂತೆ ಬಟ್ಟೆಯನ್ನು ದಾನವಾಗಿ ನೀಡಲಾಯಿತು.
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು