ಸಿನಿಮಾ

ಬೈಕ್ನಲ್ಲಿ ಕೇರಳ ಟ್ರಿಪ್ ಮುಗಿಸಿಕೊಂಡು ಬಂದ ನಟ ದರ್ಶನ್..!

Published

on

ಎರಡು ದಿನಗಳ ಹಿಂದೆ ಕೇರಳಕ್ಕೆ ಟ್ರಿಪ್ ಹೋಗಿದ್ದ ದರ್ಶನ್ & ಫ್ರೆಂಡ್ಸ್ ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ದರ್ಶನ್ ಜೊತೆ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್,’ರಾಬರ್ಟ್’ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ,ಯಶಸ್, ಪನ್ನಗ ಭರಣ ಸೇರಿದಂತೆ 15ಕ್ಕೂ ಅಧಿಕ ಜನರ ತಂಡ ಈ ಬೈಕ್ ಟ್ರಿಪ್ನಲ್ಲಿ ಭಾಗಿಯಾಗಿತ್ತು. ಈ ಮೊದಲು ಮಡಿಕೇರಿಗೆ ಹೋಗಿಬಂದಿದ್ದ ಈ ಬಳಗ, ಈಗ ಕೇರಳದ ಸುಂದರ ತಾಣಗಳನ್ನು ನೋಡಿಕೊಂಡು ಬಂದಿದೆ. ದರ್ಶನ್ ಅವರ ತಂಡ ಕೇರಳದಿಂದ ಮೈಸೂರಿಗೆ ಗುಂಡ್ಲುಪೇಟೆ ಮಾರ್ಗವಾಗಿ ವಾಪಸ್ ಆಗಿದ್ದು,ಇದೇ ಮಾರ್ಗವಾಗಿ ಬರುತ್ತಾರೆ ಎಂದು ಖಚಿತ ಮಾಹಿತಿ ಪಡೆದ ಗುಂಡ್ಲುಪೇಟೆ ಪೊಲೀಸ್ ಸಿಬ್ಬಂದಿ, ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮೀಪದ ತಗ್ಗಲೂರು ಗೇಟ್ ಬಳಿ ತಂಡವನ್ನು ನಿಲ್ಲಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.

Click to comment

Trending

Exit mobile version