ಕೂಡ್ಲಿಗಿಯಲ್ಲಿ ನೀರು ತರಲೋದ 16 ವರ್ಷದ ಅಪ್ರಾಪ್ತೆ ಬಾಯಿಗೆ ಬಟ್ಟೆ ತುರುಕಿ ಅಲ್ಲೇ ಇದ್ದ ಕೋಳಿಫಾರಂಗೆ ಕರೆದೊಯ್ದ 20 ವರ್ಷದ ಯುವಕ ಅತ್ಯಾಚಾರವೆಸಗಿರುವ ಘಟನೆ ತಾಲೂಕಿನ ಅಮಲಾಪುರದಲ್ಲಿ ಶನಿವಾರ ಮಧ್ಯಾಹ್ನ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. 20 ವರ್ಷದ ಓಬಳೇಶ ಎಂಬ ಯುವಕನೇ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪಿಯೆಂದು ಹೇಳಲಾಗುತ್ತಿದ್ದು ಆತ ಇದೀಗ ತಲೆ ಮರೆಸಿ ಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಆತ್ಯಾಚಾರಕ್ಕೆ ಒಳಗಾದ 16 ವರ್ಷದ ಬಾಲಕಿ ಬಳ್ಳಾರಿಯ ಮದರಸಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೊರೋನಾ ಮಹಾಮಾರಿಯಿಂದ ಶಾಲಾ ಕಾಲೇಜ್ ಬಂದ್ ಆಗಿದ್ದರಿಂದ ಮಗಳನ್ನು ಹಾಸ್ಟೆಲ್ ನಿಂದ ಕರೆತಂದು ಊರಿನಲ್ಲಿ ಇಟ್ಟುಕೊಂಡಿದ್ದು, ಕುಟುಂಬಸ್ಥರು ಅಮಲಾಪುರದ ತೋಟದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಶನಿವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ನೀರಿನ ತೊಟ್ಟಿಯಿಂದ ನೀರು ತರಲು ಹೋಗಿದ್ದ ಬಾಲಕಿ ಗಂಟೆಯಾದರೂ ಮನೆಗೆ ಬರದಿದ್ದರಿಂದ ಮಗಳನ್ನು ಹುಡುಕಿಕೊಂಡು ಪೋಷಕರು ಹೋದಾಗ ಅಲ್ಲಿರುವ ಓರ್ವ ವ್ಯಕ್ತಿ ನಿನ್ನ ಮಗಳನ್ನು ಕೋಳಿ ಫಾರಂ ಕಡೆ ಓಬಳೇಶನು ಕರೆದುಕೊಂಡು ಹೋಗುತ್ತಿದ್ದ ಎಂದು ಊರಿನ ಓರ್ವ ವ್ಯಕ್ತಿ ತಿಳಿಸಿದ್ದರಿಂದ ಅಲ್ಲಿಗೆ ಹೋಗಿ ನೋಡಿದಾಗಬಾಲಕಿಯ ಬಾಯಿಗೆ ಬಟ್ಟೆ ಕಟ್ಟಿ ಎಳೆದಾಡಿ ಆತ್ಯಾಚಾರ ಮಾಢಿರುವುದು ಬೆಳಕಿಗೆ ಬಂದಿದೆ. ಇತ್ತ ಓಬಳೇಶ ಆತ್ಯಾಚಾರ ವೆಸಗಿ ಪರಾರಿಯಾಗಿದ್ದು ಇದೀಗ ಪೋಲಿಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ವರದಿ-ನಂದೀಶ್ ನಾಯಕ ಎಕ್ಸ್ ಪ್ರೆಸ್ ಟಿವಿ ಕೂಡ್ಲಿಗಿ