ಮುಳಬಾಗಿಲು: ಮುಳಬಾಗಿಲು ತಾಲೂಕಿನ ತಾಯಲೂರು ಹೋಬಳಿ ಟಿ.ಅಗರ ಗ್ರಾಮದಲ್ಲಿ ರಾತ್ರಿಯಿಂದ ಕಾಡಾನೆಗಳು ದಾಳಿ ಮಾಡಿ ರೈತರು ಬೆಳೆದ ಅಪಾರ ಪ್ರಮಾಣದ ಬಾಳೆ ತೋಟ, ಟೊಮ್ಯಾಟೊ,ಭತ್ತ, ಆಲೂಗಡ್ಡೆ ತೋಟಗಳಲ್ಲಿ ಓಡಾಡಿ ಬೆಳೆ ನಷ್ಟವನ್ನು ಮಾಡಿದೆ. ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಓಡಾಡುತ್ತಿದ್ದ ಕಾಡಾನೆ ಹಾವಳಿಗೆ ಗ್ರಾಮಸ್ಥರು ಭಯಬೀತರಾಗಿದ್ದಾರೆ.ಇನ್ನೂ ಈ ಸಂಬಂಧ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು, ಕೆರೆಯ ಸಮೀಪ ಗ್ರಾಮಸ್ಥರು ಸುಳಿಯದಂತೆ ಪೋಲಿಸರು ಕಟ್ಟುನಿಟ್ಟಿನ ಮುಂಜಾಗ್ರಾತ ಕ್ರಮಗಳನ್ನು ತೆಗೆದು ಕೊಂಡು ಆನೆಗಳನ್ನು ಹಿಡಿಯಲು ಅರಣ್ಯಾಧಿಕಾರಿಗಳು ಭಲೇ ಬಿಸಿದ್ದಾರೆ.
ವರದಿ- ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು..