ತಿಪಟೂರು

ಗೋವುಗಳನ್ನು ತುಂಬಿದ್ದ ಟೊಯೋಟ ಕ್ವಾಲೀಸ್ ಅಪಘಾತ – ಬದುಕುಳಿದ 32 ಗೋವುಗಳು..!

Published

on

ತಿಪಟೂರು : ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತವಾಗಿ ಖಸಾಯಿ ಖಾನೆಗೆ ಸೇರಬೇಕಾದ 32 ಗೋವುಗಳು ತಮ್ಮ ಜೀವವನ್ನು ಉಳಿಸಿಕೊಂಡಿವೆ.ಮೊನ್ನೆತಾನೆ ವಿಧಾನಸಭೆಯಲ್ಲಿ ಗೋರಕ್ಷಣೆಯ ಬಗ್ಗೆ ಮತ್ತು ಗೋಹತ್ಯೆ ನಿಷೇದದ ಬಗ್ಗೆ ಚರ್ಚೆ ನಡೆದಿದ್ದು,ಗೋಹತ್ಯೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆದೇಶವನ್ನು ಸರ್ಕಾರ ಹೊರಡಿಸಿತ್ತು. ಆದ್ರೆ ತಿಪಟೂರಿನಲ್ಲಿ 30 ಸಿಮೆ ಹಸುಗಳು ಸೇರಿದಂತೆ 1ಹೋರಿ ಯನ್ನು ವ್ಯಾಪಾರಮಾಡಿಕೊಂಡು ಟಯೋಟ ಕ್ವಾಲೀಸ್ ನಲ್ಲಿ ತುಂಬಿಕೊಂಡು ಹೊರಟಿದ್ದ ಗಾಡಿ ಮಂಜುನಾಥಪುರದಲ್ಲಿ ರಾತ್ರಿ ಅಪಘಾತಕ್ಕೀಡಾಗಿದೆ.ಇನ್ನೂ ವಾಹನ ಚಾಲಕಿಬ್ಬರು ಅಪಘಾತವಾಗುತ್ತಿದ್ದಂತೆ ಗಾಡಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಇನ್ನೂ ವಾಹವನ್ನು ನೋಡಿದ ಸ್ಥಳಿಯರು ಹೊನ್ನವಳ್ಳಿ ಪೋಲಿಸ್ ಠಾಣೆಗೆ ಸುದ್ದಿ ತಿಳಿಸಿದರು. ಈ ಸಂದರ್ಭದಲ್ಲಿ ಪಶುವೈದ್ಯಾದಿಕಾರಿಗಳು ಗೋವುಗಳ ಆರೋಗ್ಯವನ್ನು ತಪಾಸಣೆ ಮಾಡಿ, ಗೋವುಗಳನ್ನು ಮೈಸೂರಿನ ಚಾಮುಂಡಿ ಬೆಟ್ಟದ ಹತ್ತಿರವಿರುವ ಪಿಂಬಾಲ ಗೋ ಶಾಲೆಗೆ ಕಳುಹಿಸಲಾಗುವುದೆಂದು ಪೋಲಿಸರು ತಿಳಿಸಿದ್ದಾರೆ.

ವರದಿ- ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version