ನಾಗಮಂಗಲ:ರೈತರು ಕೃಷಿ ಚಟುವಟಿಕೆ ಮಾಡುತಿದ್ದ ಜಮೀನಿಗೆ ಖುದ್ದು ತೆರಳಿ ಅನ್ನದಾತರನ್ನು ಗೌರವಿಸುವ ಮೂಲಕ ತಹಸೀಲ್ದಾರ್ ಕುಂಞ ಅಹಮ್ಮದ್ ವಿಭಿನ್ನ ಮತ್ತು ಅರ್ಥಪೂರ್ಣವಾಗಿ ದೇಶದ ಬೆನ್ನೆಲುಬಾದ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂಬ ಸಂದೇಶದೊಂದಿಗೆ ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಿದರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮೈಲಾರಪಟ್ಟಣ ರಸ್ತೆಯ ಕೆಂದನಹಳ್ಳಿ ರೈತರು ತಮ್ಮ ಕುಟುಂಬಸ್ಥರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಹೊಲಕ್ಕೆ ತೆರಳಿದ ಕುಂಞ ಅಹಮ್ಮದ್ ರೈತರ ಕುಂದು ಕೊರತೆಯೊಂದಿಗೆ ಕುಶಲೋಪರಿ ವಿಚಾರಿಸಿ, ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿ ಪಡೆದರು. ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ರೈತರಿಗೆ ರೈತ ದಿನಾಚರಣೆಯ ಶುಭಾಶಯ ಕೋರಿ, ಶಾಲು ಹೊದಿಸಿ ಮಾಲಾರ್ಪಣೆಯೊಂದಿಗೆ ಹಣ್ಣಿನ ಬುಟ್ಟಿ ನೀಡುವ ಮೂಲಕ ಗೌರವಿಸಿದರು. ಇನ್ನೂ ಈ ಸಂದರ್ಭದಲ್ಲಿ ಸ್ಥಳೀಯ ರೈತರಾದ ಸುರೇಶ್ ಮತ್ತು ಕೃಷ್ಣೇಗೌಡ, ಗ್ರಾಮ ಲೆಕ್ಕಿಗ ಸಂತೋಷ್ ಹಾಗೂ ತಾಲೂಕು ಭೂಮಾಪಕ ರಾಘವೇಂದ್ರ, ಪೊಲೀಸ್ ಇಲಾಖೆಯ ರೇವಣ್ಣ ಇದ್ದರು.
ವರದಿ-ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.