ಮಳವಳ್ಳಿ: ಭಾರತೀಯ ಜನತಾ ಪಾರ್ಟಿ ಪಕ್ಷದವತಿಯಿಂದ ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮದಿನಾಚರಣೆಯನ್ನು ಮಳವಳ್ಳಿ ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಬಿಜೆಪಿ ತಾಲ್ಲೂಕು ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಎಂ.ಎನ್ ಕೃಷ್ಣ ರವರು ಪುಷ್ವಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ,22 ಕ್ಕೂ ಹೆಚ್ಚು ಪಕ್ಷಗಳ ಜೊತೆಗೂಡಿ ದೇಶವನ್ನು ಮುನ್ನಡೆಸಿದ ಪ್ರಧಾನಿ ಎಂದರೆ ಅಟಲ್ ಜೀ ರವರು. ದೇಶದಲ್ಲಿ ಅಜಾತ ಶತ್ರು ಎಂದೇ ಹೆಸರು ಪಡೆದಿರುವ ಮಹಾನ್ ವ್ಯಕ್ತಿ. ಇನ್ನೂ ಗ್ರಾಮೀಣಾ ಪಂಚಾಯತ್ ಅಭಿವೃದ್ಧಿ ಮಾಡಿದ ಕೀರ್ತಿ ಮಾಜಿ ಪ್ರಧಾನಿ ಅಟಲ್ ಜೀಗೆ ಸಲ್ಲುತ್ತದೆ ಎಂದರು. ಇನ್ನೂ ಈ ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡ ಅಪ್ಪಾಜೀಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸಿ ನಾಗೇಗೌಡ, ಜಿಲ್ಲಾ ವಕ್ತಾರ ಚಿಕ್ಕಣ್ಣ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ದೇವರಾಜು, ಪುರಸಭೆ ಸದಸ್ಯ ರವಿ, ಯುವ ಮೋರ್ಚಾ ಅಧ್ಯಕ್ಷ ಮೋಹನ್ ಕುಮಾರ್, ಕನ್ನಳ್ಳಿ ಪ್ರಸಾದ್, ಅಶೋಕ ಕ್ಯಾತನಹಳ್ಳಿ, ಸೇರಿದಂತೆ ಮತ್ತಿತ್ತರರು ಭಾಗಿಯಾಗಿದ್ದರು.
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ