ಮೊಳಕಾಲ್ಮೂರು: ಭಾರತೀಯ ಜನತಾ ಪಾರ್ಟಿ ಮಂಡಳದ ವತಿಯಿಂದ ಭಾರತದ ಮಾಜಿ ಪ್ರಧಾನಿಗಳಾದ ,ಅಜಾತಶತ್ರು ,ಭಾರತರತ್ನ ಸನ್ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯನ್ನು ಇಂದು ಬೆಳಿಗ್ಗೆ 11 ಕ್ಕೆ ಮೊಳಕಾಲ್ಮೂರು ಪಕ್ಷದ ಕಚೇರಿಯಲ್ಲಿ ನೆರೆವೇರಿಸಲಾಯಿತು. ಇನ್ನೂ ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಂಡಳಿ ಅಧ್ಯಕ್ಷರಾದ ಡಾ.ಮಂಜುನಾಥ ಪಿಎಂ ರವರು, ತೇಜಸ್ವಿ ಮುಖಚರ್ಯ ಹಚ್ಚಲು ಸಿದ್ಧಾಂತ ಪ್ರತಿಪಾದನೆ ಅಭಿವೃದ್ಧಿಪರ ಚಿಂತನೆಗಳಿಂದ ಭಾರತದ ಜನರ ಹೃದಯ ಗೆದ್ದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಸರ್ವಶಿಕ್ಷಣ ಅಭಿಯಾನ, ಚತುಷ್ಪಥ ರಸ್ತೆ, ಗ್ರಾಮ ಸಡಕ್ ಯೋಜನೆಯನ್ನು, ರಾಷ್ಟ್ರಕ್ಕೆ ಸಮರ್ಪಿಸಿದ ಮೇರು ವ್ಯಕ್ತಿತ್ವ ಅಟಲ್ ಅವರದು.ಈ ದಿನವನ್ನು ಕೇಂದ್ರ ಸರ್ಕಾರ “ಸುಶಾಸನ “ಜನ ಹೊನ್ನಾಗಿ ಆಚರಿಸಲಾಗುತ್ತಿದೆ.ಈ ದಿನದ ಅಂಗವಾಗಿ ಕೇಂದ್ರದ ನಮೋ ಸರಕಾರ ಕಿಸನ್ ಸನ್ಮಾನ ಯೋಜನೆಯಡಿ 9ಕೋಟಿ ರೈತರಿಗೆ ತಲಾ 2ಸಾವಿರೂ ಗಳಂತೆ 18000ಕೋಟಿ ರೂ ಗಳನ್ನು ಮಧ್ಯವರ್ತಿಗಳು ಹಾವಳಿಯಿಲ್ಲದಂತೆ ನೇರ ವರ್ಗಾವಣೆ ಮಾಡುತ್ತಿದ್ದಾರೆ.ಇದು ನಮ್ಮ ಸರ್ಕಾರದ ಸುಶಾಸನಕ್ಕೆ ಉದಾಹರಣೆ ಎಂದರು. ಇನ್ನೂ ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ರಾದ ಕಿರಣ್ ಗಾಯಕ್ವಾಡ್ ,ಜಿಲ್ಲಾ ನೇಕಾರ ಪ್ರಕೋಷ್ಠದ ಸಂಚಾಲಕರಾದ ಶಾಂತರಾಮ್ ಸಭಾಪತಿ ,ರೈತ ಮೋರ್ಚಾ ಅಧ್ಯಕ್ಷರಾದ ಮಂಜುನಾಥ್ ಸ್ವಾಮಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ ವಿಜಯ್ ‘ಎಸ್ಟಿ ಮೋರ್ಚಾ ಅಧ್ಯಕ್ಷರಾದ ಸಿದ್ಧಾರ್ಥ್ ಪ್ರಧಾನ ಕಾರ್ಯದರ್ಶಿ ಪ್ರಭು,ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಸರ್ವಮಂಗಳಾ , ಕಾರ್ಯದರ್ಶಿ ರೂಪ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಣ್ ಉಪಾಧ್ಯಕ್ಷರಾದ ಶ್ರೀಮತಿ ಶುಭಾ ಪೃಥ್ವಿರಾಜ್ ,ಪಟ್ಟಣ ಪಂಚಾಯತ್ ಸದಸ್ಯರಾದ ಮಂಜಮ್ಮ ತಿಪ್ಪೆಸ್ವಾಮಿ ದಿಲೀಪ್ ಇನ್ನು ಮುಂತಾದವರು ಉಪಸ್ಥಿತರಿದ್ದರು .
ವರದಿ- ಪಿ ಎಂ ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮೂರು