ಸಾಹಸ ಸಿಂಹ’ ಡಾ.ವಿಷ್ಣುವರ್ಧನ್ ಅವರು ಅಪಾರ ಸಂಖ್ಯೆ ಅಭಿಮಾನಿಗಳನ್ನು ಅಗಲಿ ಇಂದಿಗೆ 11 ವರ್ಷ ಪೂರೈಸಿದೆ.ಎಷ್ಟೇ ವರ್ಷಗಳು ಉರುಳಿದರೂ ಜನರಿಗೆ ಅವರ ಮೇಲಿದ್ದ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ಇಂದಿಗೂ ಕರುನಾಡಿನ ಕೋಟ್ಯಂತರ ಜನರಿಗೆ ವಿಷ್ಣುದಾದಾ ಅವರೇ ಫೇವರಿಟ್ ಹೀರೋ. ನೆಚ್ಚಿನ ನಟನ ಪುಣ್ಯತಿಥಿ ಆಚರಿಸುತ್ತಿರುವ ಅಭಿಮಾನಿಗಳು ಬೆಂಗಳೂರಿನ ‘ಅಭಿನವ್ ಸ್ಟುಡೀಯೊ’ ಆವರಣದಲ್ಲಿ ಇರುವ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸುತ್ತಿದ್ದಾರೆ.ಇನ್ನೂ ಭಾರತಿ ವಿಷ್ಣುವರ್ಧನ್ ಮತ್ತು ಅವರ ಕುಟುಂಬದವರು ಮೈಸೂರಿನಲ್ಲಿರುವ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು