Uncategorized

ಅಕ್ರಮ ನೀರಿನ ಪೈಪ್ ಗಳ ತೆರವು ಕಾರ್ಯಾಚರಣೆ..!

Published

on

ಸಿರುಗುಪ್ಪ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತುಂಗಭದ್ರಾ ನದಿಯ ನೀರಾವರಿ ಕಾಲುವೆಗಳಿಗೆ ಮೇಲ್ಬಾದ ರೈತರು ಅಕ್ರಮವಾಗಿ ನೀರಿನ ಪೈಪಗಳನ್ನು ಅಳವಡಿಸಿದ್ದರು. ಇದರ ಪರಿಣಾಮವಾಗಿ ದೇವಿಪುರ, ತೆಕ್ಕಲಕೋಟೆ, ಹಳೇಕೋಟೆ, ಉಪ್ಪಾರ ಹೊಸಹಳ್ಳಿ,ಸೇರಿದಂತೆ, ಹಲವು ಗ್ರಾಮದ ರೈತರ ಜಮೀನುಗಳಿಗೆ ನೀರು ಸರಬರಾಜು ಆಗುತಿರಲಿಲ್ಲ.ಈ ನಿಟ್ಟಿನಲ್ಲಿ ರೈತರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತರಾದ ಅಧಿಕಾರಿಗಳು ತಂಡವನ್ನು ರಚಿಸಿ ಸಿರುಗುಪ್ಪ ತಹಶೀಲ್ದಾರ್ ರ ನೇತೃತ್ವದದಲ್ಲಿ ಜೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ,ನೀರಾವರಿ ಇಲಾಖೆ, ಕಂದಾಯ ಇಲಾಖೆಯ ಸಹಯೋಗದೊಂದಿಗೆ ಏಕಾಏಕಿ ದಾಳಿ ನಡೆಸಿದ ತಂಡ ಅಕ್ರಮವಾಗಿ ಅಳವಡಿಸಿದ್ದ 34 ನೀರಿನ ಪೈಪ್ ಗಳನ್ನು ಜೆಸಿಬಿ ,ಹಿಟ್ಟಚ್ಚಿ, ಬಳಸಿ ತೆರವುಗೊಳಿಸಲಾಯಿತು.

ವರದಿ- ಡಿ.ಅಲಂ ಬಾಷಾ ಎಕ್ಸ್ ಪ್ರೆಸ್ ಟಿವಿ ಸಿರುಗುಪ್ಪ

Click to comment

Trending

Exit mobile version