ಮಳವಳ್ಳಿ : ಮಳವಳ್ಳಿ ಪಟ್ಟಣದ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಡಾ.ಯಮದೂರು ಸಿದ್ದರಾಜು ರವರ ನಿವಾಸದಲ್ಲಿ ಬಿಜೆಪಿ ಬೆಂಬಲಿತರಾದ ವೈಪಿ ಶಿವಸ್ವಾಮಿ ವಿಜಯ ಶಾಲಿಯಾಗಿದ್ದ ಹಿನ್ನಲೆಯಲ್ಲಿ ಡಾ.ಯಮದೂರು ಸಿದ್ದರಾಜು ರವರು ಅಭಿನಂದಿಸಿದರು. ಬಳಿಕ ಡಾ.ಯಮದೂರು ಸಿದ್ದರಾಜು ಮಾತನಾಡಿ, ದೇಶದಲ್ಲಿರುವ ಪ್ರದಾನಿ ಮೋದಿ ಹಾಗೂ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ರವರು ಆಡಳಿತವನ್ನು ಮೆಚ್ಚಿ ಗ್ರಾಮ ಪಂಚಾಯಿತಿಯಲ್ಲೂ ಸಹ ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಲು ಜನರು ಉತ್ಸಾಹ ತೋರುತ್ತಿದ್ದಾರೆ ಎಂದರು. ಇನ್ನೂ ಗ್ರಾಮಪಂಚಾಯಿತಿ ಅಭಿವೃದ್ಧಿ ಯ ನಿಟ್ಟಿನಲ್ಲಿ ಶಿವಸ್ವಾಮಿ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡ ಅಪ್ಪಾಜಿಗೌಡರು, ಮಂಜುನಾಥ ಯಮದೂರು, ಚಿನ್ನಸ್ವಾಮಿ, ನಾಗರಾಜು , ವಕೀಲ ಮುತ್ತರಾಜು, ರುದ್ರ, ತಿಮ್ಮಯ್ಯ, ಸೇರಿದಂತೆ ಮತ್ತಿತ್ತರರು ಇದ್ದರು.
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ