ಬಾಗಲಕೋಟೆ: ಗ್ರಾಮದಲ್ಲಿ ಯಾರದೊ ಮದುವೆ ಹಾಗೂ ಇನ್ನಿತರ ಸಭೆ ಸಮಾರಂಭ ಇದ್ದರೆ ಮೂರು ದಿನ ಮುಂಚಿತವಾಗಿ ಅಲ್ಲಿ ತೆರಳಿ ಕಸ ಗುಡಿಸುವದರಿಂದ ಹಿಂಡಿದ್ದು ಊಟದ ಪ್ಲೇಟ್ ತೊಳೆಯುವವರೆಗೆ ಎಲ್ಲ ಕೆಲಸ ಮಾಡಿ ಸಮಾರಂಭ ಯಶಸ್ವಿಗೊಳಿಸುವ ಸಮಾರಂಭ ಸೇವಕ ವ್ಯಕ್ತಿಯ ಸಮಾಜಸೇವೆ ಮನಗಂಡ ಗ್ರಾಮದ ಯುವಕರು ಚುನಾವಣೆಯಲ್ಲಿ ಸ್ಪರ್ಧಿಸಿ ಅವನನ್ನು ಗೆಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹುಲ್ಲಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಮನಿನಾಗರ ಗ್ರಾಮದ ರಾಮಣ್ಣಗೌಡ ಮುಲಿಮನಿ ಗ್ರಾಮದಲ್ಲಿ ಯಾರದ್ದೊ ಮದುವೆ ಹಾಗೂ ಇನ್ನಿತರ ಸಭೆ ಸಮಾರಂಭ ಇರಲ್ಲಿ ಸಂಕೋಚ ಪಡದೆ ಅಲ್ಲಿ ಮುಂದೆ ನಿಂತು ಎಲ್ಲಾ ಕಾರ್ಯ ಮಾಡಿ ಮುಗಿಸಿ ನಂತರ ತಮ್ಮ ಮನೆಗೆ ವಾಪಾಸ್ಸಾಗುತ್ತಿದ್ದ. ಗ್ರಾಮಸ್ಥರು ರಾಮಣ್ಣ ಗೌಡ ಮುಲಿಮನಿಯ ಸಮಾಜ ಸೇವೆ ಮನಗಂಡು ಗ್ರಾಮದ ಯುವಕರು ಅವನನ್ನು ಗ್ರಾಮ ಪಂಚಾಯತ್ ಚುಣಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿ ತಮ್ಮ ಸ್ವಂತ ಹಣ ಖರ್ಚು ಮಾಡಿ ಇದೀಗ ಆತನನ್ನು ಗೆಲ್ಲಿಸಿದ್ದಾರೆ. ಇನ್ನೂ ಯುವಕರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಗ್ರಾಮ ಪಂಚಾಯತ್ ಗೆ ಆಯ್ಕೆಯಾದ ರಾಮಣ್ಣಗೌಡ ಗ್ರಾಮ ಅಭಿವೃದ್ಧಿಗಾಗಿ ಶ್ರಮಿಸುವಂತೆ ಹಾರೈಸಿದ್ದಾರೆ.
ವರದಿ-ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ