ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕನೋರ್ವ ತಮ್ಮ ಮನೆ ದೇವರ ಪೂಜಾ ಕಾರ್ಯಕ್ರಮದಲ್ಲಿ ತಲ್ವಾರನಿಂದ ಕುಂಬಳಕಾಯಿ ಹಾಗೂ ಬಾಳೆ ದಿಂಡು ಕತ್ತರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭೀಮಾತೀರದ ಹಂತಕ ಬಾಗಪ್ಪ ಹರಿಜನ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ್ ತಾಲೂಕಿನ ಬಬಲಾದ ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯಕ್ರಮ ಬಳಿಕ ತಲ್ವಾರ್ ನಿಂದ ಕುಂಬಳಕಾಯಿ ಹಾಗೂ ಬಾಳೆ ದಿಂಡನ್ನು ಕೊಚ್ಚಿದ್ದಾರೆ. ಇನ್ನು ಬಾಗಪ್ಪ ಮಕ್ಮಲ್ ಟೋಪಿ, ಬಿಳಿ ಧೋತಿ, ಬಿಳಿ ಶಲ್ಯದಲ್ಲಿ ವಿಶೇಷ ವಸ್ತ್ರದಲ್ಲಿ ವಿಭಿನ್ನವಾಗಿ ಕಂಡುಬಂದಿದ್ದಾರೆ. ಅಲ್ಲದೇ, ಇತ್ತೀಚೆಗೆ ಅಷ್ಟೇ ವಿಜಯಪುರದ ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಜೈಲಿನಿಂದ ಜಾಮೀನು ಪಡೆದು ಭೀಮಾತೀರದ ಹಂತಕ ಬಾಗಪ್ಪ ಹೊರ ಬಂದಿದ್ದಾರೆ…
ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ