ಚಿಕ್ಕಬಳ್ಳಾಪುರ

ಯುವ ಮುಖಂಡ ನಾಯಕ ವಿನಯ್ ಶಾಮ್ ನನ್ನು ಬೆಂಬಲಿಸಿ, ಬೆಳೆಸಿ – ಜಿ ಹೆಚ್ ನಾಗರಾಜ್…!

Published

on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಇದೀಗ ರಾಜಕೀಯ ಸಂಘಟನೆಗಳು ಪ್ರಾರಂಭವಾಗಿದೆ, ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರು ಇದೀಗ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮುಂದಾಗಿ ಗೆಲುವು ಸಾಧಿಸಿದ್ದಾರೆ, ಚಿಕ್ಕಬಳ್ಳಾಪುರ ನಗರದ ಪ್ರಶಾಂತ್ ನಗರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನೆ ಹಾಗೂ ಕೆಪಿಸಿಸಿ ಸದಸ್ಯ ಎನ್ ವಿನಯ ಶಾಮ್ ಹುಟ್ಟು ಹಬ್ಬವನ್ನು ತಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರೊಂದಿಗೆ ಹಾಗೂ ಮುಖಂಡರೊಂದಿಗೆ ಸಂಭ್ರಮಾಚರಣೆಯಿಂದ ಆಚರಿಸಲಾಯಿತು. ಇನ್ನೂ ಈ ವೇಳೆ ವಿನಯ್ ಶಾಮ್ ತಂದೆ ಜಿ,ಹೆಚ್ ನಾಗರಾಜ್ ರವರು ಮಾತನಾಡಿ ನಮ್ಮ ಕುಟುಂಬದಿಂದ ನಮ್ಮ ಮಗ ವಿನಯ್ ಶಾಮ್ ರವರನ್ನು ಪೂರ್ಣ ಪ್ರಮಾಣವಾಗಿ ರಾಜಕೀಯಕ್ಕೆ ಇವತ್ತಿನಿಂದ ಅರ್ಪಿಸಿದ್ದೇನೆ, ವಿನಯ್ ಶಾಮ್ ಗೆ ಯುವಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಚತುರತೆ ಇದೆ, ಆದರೆ ರಾಜಕೀಯವಾಗಿ ಅನುಭವವಿಲ್ಲದೆ ಇರಬಹುದು, ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡುವ ಗುಣವಿದೆ. ಪಕ್ಷದ ಮುಖಂಡರು ಸದಸ್ಯರು ಕಾರ್ಯಕರ್ತರು ಆತನ ಬೆನ್ನೆಲುಬಾಗಿ ನಿಂತು ಬೆಳೆಸಬೇಕೆಂದು ಮನವಿ ಮಾಡಿದರು. ತದನಂತರ ಕೆಪಿಸಿಸಿ ಸದಸ್ಯ ವಿನಯ ಶಾಮ್ ಅವರು ಮಾತನಾಡಿ ನಮ್ಮ ಪಕ್ಷದ ಹಿರಿಯರಿಗೆ ಮುಖಂಡರಿಗೆ ಸದಸ್ಯರಿಗೆ ಮೊದಲನೆಯದಾಗಿ ಅಭಿನಂದನೆ ತಿಳಿಸುತ್ತೇನೆ. ಇವತ್ತು ಪಕ್ಷದ ಮುಖಂಡರು ಹಾಗೂ ಸದಸ್ಯರು ಸಹಸ್ರಾರು ಸಂಖ್ಯೆಯಲ್ಲಿ ಬಂದು ನನ್ನ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇಲ್ಲಿ ಬಂದಿರುವಂತಹ ಜೀವನ ಪರಿ ಚಿರಋಣಿಯಾಗಿರುತ್ತೇನೆ. ಪಕ್ಷಕ್ಕೆ ಸದಸ್ಯರಿಗೆ ಇನ್ನಷ್ಟು ಬೆನ್ನೆಲುಬಾಗಿ ಎಂದು ತಿಳಿಸಿದರು.

ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version