ಗುಡಿಬಂಡೆ: ಈ ಬಾರಿಯ ಚುನಾವಣೆಯಲ್ಲಿ ಗ್ರಾಮೀಣ ಮತದಾರರು ನಮ್ಮ ಬಣದ ಪರ ಒಲವು ಹೊಂದಿದ್ದು ಸುಮಾರು 18 ಕ್ಕೂ ಅಧಿಕ ಸದಸ್ಯರು ನಮ್ಮ ಬಣದಿಂದ ಗೆದ್ದು ಬದಿದ್ದಾರೆ ಎಂದು ಸಮಾಜ ಸೇವಕ ಗುಂಜೂರು ಆರ್ ಶ್ರೀನಿವಾಸ್ ರೆಡ್ಡಿ ತಿಳಿಸಿದರು. ಸೊಮೇನಹಳ್ಳಿ ಹೊಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವುಗಳಿಸಿದ ಶ್ರಿನಿವಾಸ್ ರೆಡ್ಡಿ ಬಣದ ಆಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು , ನನ್ನ ಸಮಾಜ ಸೇವೆಯನ್ನು ಗುರುತಿಸಿದ ಗ್ರಾಮೀಣ ಜನರು ನಮ್ಮ ಬೆಂಬಲಿತ ಆಭ್ಯರ್ಥಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದರೆ. ತಾಲೂಕಿನ 8 ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಬಣದಿಂದ ಗೆದ್ದು ಬಂದಿದ್ದಾರೆ. ಇನ್ನೂ ಎರಡು ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಬಣದ ಆಭ್ಯರ್ಥಿಗಳು ಅಧ್ಯಕ್ಷರಾಗಿ ಅಧಿಕಾರ ಚುಕ್ಕಾಣಿ ಹಿಡಿಯುತ್ತೆವೆಂದರು. ಇನ್ನೂ ಈ ವೇಳೆ ಸಮಾಜ ಸೇವೆಯ ಮೂಲಕ ರಾಜಕೀಯ ಪ್ರವೇಶಿಸಿದ ಹಾಲಿ ಶಾಸಕ ಸುಬ್ಬಾರೆಡ್ಡಿ ಕಳೆದ 8 ವರ್ಷದಿಂದ ಮಾಡಿದ್ದದರು ಏನು? ಸಮಾಜ ಸೇವೆಯ ಹೆಸರಿನಲ್ಲಿ ರಾಜಕೀಯ ಮಾಡಿ ಈ ಬಾಗದ ನಾಗರಿಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಗುಡುಗಿದರು. ಅವಿವೇಕಿ ಹಾಗೂ ನಿದ್ದೆ ಮಾಡುತ್ತಿರುವ ಶಾಸಕರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು. ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಹಾಗೂ ಕಾಂಗ್ರೇಸ್ ಬೆಂಬಲಿತ ಅಬ್ಯಾರ್ಥಿಗಳು ಬಾರಿ ಪ್ರಮಾಣದಲ್ಲಿ ಸೊತಿದ್ದು ನಮ್ಮ ಬಣದ ಸದಸ್ಯರು ಗೆದ್ದಿದ್ದಾರೆ, ಇದು ಶಾಸಕರಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು. ತಾಲೂಕಿನಲ್ಲಿ ಇವರು ಮಾಡುತ್ತಿರುವ ದಬ್ಬಾಳಿಕೆ, ದೌರ್ಜನ್ಯವನ್ನು ಪ್ರಶ್ನಿಸಿದರೆ ಅವರ ಮೇಲೆ ಜಾತಿ ನಿಂದನೆ ಮತ್ತು ದೌರ್ಜನ್ಯದ ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಇವರಿಗೆ ಜನರೆ ಬುದ್ದಿ ಕಲಿಸಬೇಕೆಂದರು.
ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ