ಬಾಗೇಪಲ್ಲಿ: ಗ್ರಾಮ ಪಂಚಾಯತಿಗಳಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಬಾಗೆಪಲ್ಲಿ ವಿಧಾನಸಭಾ ಕ್ಷೇತ್ರದ ಪ್ರಮುಖ ಮುಖಂಡ ಹಾಗೂ ಸಮಾಜಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಹಾಗೂ ರೈತಸಂಘ(ಹಸಿರುಸೇನೆ)ನೇತೃತ್ವದಲ್ಲಿ ನಡೆಸಲಾಯಿತು. ಈ ವೇಳೆ ಗುಂಜೂರು ಶ್ರೀನಿವಾಸರೆಡ್ಡಿ ಮಾತನಾಡಿ, ಜನಪ್ರತಿನಿಧಿಗಳ ಮೃದುಧೋರಣೆಯಿಂದಾಗಿ ಇಂದು ತಾಲ್ಲೂಕು ಆಡಳಿತ ಸಂಪೂರ್ಣ ನಿದ್ರಾವಸ್ಥೆಯಲ್ಲಿದೆ. ಗ್ರಾಮ, ತಾಲ್ಲೂಕು ಪಂಚಾಯತಿಗಳ ಸ್ಥಿತಿಯೂ ಹೀಗೆ ಇದೆ. ರೈತರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ರೈತ, ಶೋಷಿತ, ಜನಸಾಮಾನ್ಯರ ನ್ಯಾಯಯುತ ಕೆಲಸ ಮಾಡಿಕೊಡಲು ಯಾವ ಅಧಿಕಾರಿ, ಸಿಬ್ಬಂದಿಯಾಗಲಿ ವಿಳಂಬ ಮಾಡಿದರೆ ನನಗೆ ತಿಳಿಸಿ.ನಾನು ಯಾವುದೇ ರೀತಿಯ ಹೋರಾಟಕ್ಕೆ ನಿಮ್ಮ ಜೊತೆ ಇರುತ್ತೇನೆ, ಅದು ಅಲ್ಲದೆ ಈಗ ನೂತನ ಚುನಾಯಿತ ಸದಸ್ಯರು ಗ್ರಾಮಗಳ ಏಳಿಗೆಗೆ ಶ್ರಮಿಸಬೇಕಾಗಿದೆ. ಗ್ರಾಮ ಪಂಚಾಯತಿಯಿಂದ ವಿಧಾನಸಭೆಯವರೆಗೆ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಪರಿಸ್ಥಿತಿಯಲ್ಲಿ ಎದೆಗುಂದದೆ ರೈತ, ಶ್ರಮಿಕರ ಪರವಾಗಿ ಕೆಲಸಮಾಡಿ. ನಿಮ್ಮ ಜೊತೆ ಇಡೀ ರಾಜ್ಯದ ರೈತ ಸಮುದಾಯ ಕೈಜೋಡಿಸಲು ಸದಾ ಸಿದ್ದವಿದೆ ಎಂದರು.ಇನ್ನೂ ಕಾರ್ಯಕ್ರಮದಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷ ದಪ್ಪರ್ತಿ ಮುರಳಿ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆನಂದ್ ಸೇರಿದಂತೆ ನೂತನ ಗ್ರಾಮ ಪಂಚಾಯಿತಿ ಸದಸ್ಯರು, ತಾಲ್ಲೂಕು ಘಟಕ ದ ಮುಖಂಡರು ಭಾಗವಹಿಸಿದ್ದರು.
ವರದಿ- ಯಶ್ವಂತ್ ಎಕ್ಸ್ ಪ್ರೆಸ್ ಟಿವಿ ಬಾಗೇಪಲ್ಲಿ