ಇಂಡಿ

ಕೆಎಸ್ ಆರ್ ಟಿಸಿ ಡ್ರೈವರ್ ಆತ್ಮಹತ್ಯೆಗೆ ಯತ್ನ- ಮೇಲಾಧಿಕಾರಿಗಳಿಂದ ಕಿರುಕುಳದ ಆರೋಪ…!

Published

on

ಇಂಡಿ: KSRTC ಡಿಪೋ ಎದುರೇ ಪೆಟ್ರೋಲ್ ಸುರಿದುಕೊಂಡು ಚಾಲಕ ಸರ್ಪರಾಜ ಪಟೇಲ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.ಇನ್ನು ಸರ್ಪರಾಜ್ ಇಂಡಿ ಘಟಕದಲ್ಲಿ ಡ್ರೈವರ್ ಕಮ್ ಕಮ್ ಕಂಡೆಕ್ಟರ್ ಯಾಗಿ ಕೆಲಸ ನಿರ್ವಹಿಸುತ್ತಿದ್ದು, ಹಲವು ದಿನಗಳಿಂದ ಮೇಲಾಧಿಕಾರಿಗಳಾದ ದಾನಮ್ಮ ಜೋಡಮುಟ್ಟಿ, ಯಲಗೂರಪ್ಪ ತಾಳೆವಾಡ, ಎಂ.ಬಿ. ಬಿಸನಾಳ್ ಕಿರುಕುಳ ನೀಡುತ್ತಿದ್ದಾರೆ, ಘಟಕದಲ್ಲಿ ಸರಿಯಾಗಿ ಕಾರ್ಯನಿರ್ವಾಹಣೆ ಮಾಡಿದ್ರೂ ಇಲ್ಲ ಸಲ್ಲದ ಆರೋಪ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಸರ್ಪರಾಜ್ ಹೇಳಿದ್ದಾರೆ. ಇನ್ನೂ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಹೊಟ್ಟೆಯಲ್ಲಿ ಪೆಟ್ರೋಲ್ ಹೋಗಿರುವ ಹಿನ್ನೆಲೆ ಸರ್ಪರಾಜ್ ನನ್ನು ಇಂಡಿ ತಾಲೂಕಾಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಇನ್ನೂ ಸರ್ಪರಾಜ ಪಟೇಲ್ ರ ಆರೋಗ್ಯ ಸ್ಥಿತಿ ಗಂಬೀರವಾಗಿದ್ದು, ಸ್ಥಳಕ್ಕೆ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್, KSRTC ಜಿಲ್ಲಾಧಿಕಾರಿ ಹಿರೇಕುರಬರ ಹಾಗೂ ಇಂಡಿ ಸಿ.ಪಿ.ಐ.ರಾಜಶೇಖರ ಭೇಟಿ ನೀಡಿದ್ದಾರೆ.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Click to comment

Trending

Exit mobile version