ಕೊರಟಗೆರೆ: ಕೊರಟಗೆರೆ ತಾಲ್ಲೂಕಿನ ವೀರಾ ನಾಗಮ್ಮ ಕಲ್ಯಾಣ ಮಂಟಪದಲ್ಲಿ ಇಂದು ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ತಾಲ್ಲೂಕು ಅಧ್ಯಕ್ಷ ಪವನಕುಮಾರ್ ‘ವಿಚಾರ ತಿಳಿಯದೇ ಒಬ್ಬ ಕ್ಲಾಸ್ ಓನ್ ಕಂಟ್ರಾಕ್ಟರ್ ಭಾರತೀಯ ಜನತಾ ಪಾರ್ಟಿ ಪಕ್ಷ, ವಾಮಾಮಾರ್ಗ ಅನುಸರಿಸುತ್ತಿದೇ ಎಂದು ಸಭಾಷ್ ಗಿರಿಗಾಗಿ ಮಾತನಾಡುವುದು ಸರಿಯಲ್ಲ ಎಂದು ಗುಡುಗಿದರು. ತದನಂತರ ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ ಮಾತನಾಡಿ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ, ತಾಲ್ಲೂಕಿನಲ್ಲಿ ಭ್ರಷ್ಟಚಾರ ತುಂಬಿದೆ, ಅದರ ಬಗ್ಗೆ ಚರ್ಚೆ ಮಾಡಬೇಕಾದವರು ಆಮಿಷಗಳ ಆರೋಪ ಮಾಡಿಕೊಂಡು ಶೋಕಿ ರಾಜಕಾರಣ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಗುಡುಗಿದರು. ಇನ್ನೂ ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಕುಮಾರ್, ತಿಮ್ಮಜ್ಜ, ವಿಜಯ್, ಪ್ರಸನ್ನ, ನಾಗರಾಜು, ಮಹೇಶ್, ದೊಡ್ಡಯ್ಯ, ಕಾತ್ಯಾಯಿನಿ, ಸುಶೀಲಮ್ಮ, ಗುರುದತ್ತ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ವರದಿ- ಕೆ.ಎನ್ ದೇವರಾಜ್ ಎಕ್ಸ್ ಪ್ರೆಸ್ ಟವಿ ಕೊರಟಗೆರೆ