ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿರೋ ಘಟನೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ಸದ್ಯ ಚಿಂತಾಮಣಿ ತಾಲ್ಲೂಕಿನ ಅಮಿಟಳ್ಳಿ ಗ್ರಾಮದ ಗಂಗಾಧರ್ ಬಂಧಿತ ಆರೋಪಿಯಾಗಿದ್ದು,ಈತನಿಂದ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಸುಮಾರು ೨.೬೦ ಲಕ್ಷ ಬೆಲೆ ಬಾಳುವ ೮ ದ್ವಿಚÀಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಮುಷ್ಠೂರು ಗ್ರಾಮದಲ್ಲಿ ವಾಸವಾಗಿದ್ದ ಈತ ತನ್ನ ಮನೆಯ ಹಿಂದೆ ಕಳವು ಮಾಡಿದ್ದ ವಾಹನಗಳನ್ನು ನಿಲ್ಲಿಸಿಕೊಂಡಿದ್ದ ಎನ್ನಲಾಗಿದ್ದು,ಹೀಗಾಗಿ ಪೊಲೀಸರು ಆ ಎಲ್ಲಾ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಸಂಬAಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.