ಕೋಲಾರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಸಭೆ
ಕೋಲಾರ:ಡಿ-೩೧: ಕೋಲಾರ ಜಿಲ್ಲೆಯ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಮಿಟಿಯ ಸದಸ್ಯರ ಜೊತೆ ದೀರ್ಘವಾದ ಚರ್ಚೆ ನಡೆಸಲಾಯಿತು. ಪತ್ರಕರ್ತರ ಸಮಸ್ಯೆಗಳು ಕುರಿತು ಹಾಗೂ ಅವರ ಜವಾಬ್ದಾರಿಯ ಜೊತೆಗೆ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯ ಬಗ್ಗೆ ಕೂಡ ಚರ್ಚೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಜಾನಕಿಮೋಹನ್ ಹಾಗೂ ಕಮಿಟಿ ಸದಸ್ಯರಾದ ಮೋಹನ್ರವರು ಸೇರಿದಂತೆ ಕೋಲಾರ ನಗರ ಹಾಗೂ ಗ್ರಾಮಾಂತರ ಭಾಗದ ಪತ್ರಕರ್ತರು ಪಾಲ್ಗೊಂಡಿದ್ದರು.