Uncategorized

ಸಿದ್ಧಗಂಗಾ ಶ್ರೀಗಳ ಬಗ್ಗೆ ಮಹಿಳೆಯಿಂದ ಹಗುರ ಮಾತು..!

Published

on

ಸಿದ್ಧಗಂಗಾ ಶ್ರೀಗಳ ಬಗ್ಗೆ ಬೆಂಗಳೂರಿನ ಮಹಿಳೆಯೂಬ್ಬಳು
ಅವಹೇಳನಕಾರಿ ಟ್ವೀಟ್ ಮಾಡಿ ಹಗುರವಾದ ಮಾತನಾಡಿದ್ದಾಳೆ.
ಆಕೆ ತನ್ನ ಟ್ವಿಟರ್ ಖಾತೆಯಲ್ಲಿ ಶ್ರೀಗಳು ನಿಧನರಾದ ದಿನ ರಜೆ
ಘೋಷಣೆಯಾಗಿದ್ದಕ್ಕೆ, ಸೋ ಇದು ಅಫಿಷಿಯಲ್! ನಾಳೆ ಶಾಲೆ ,
ಕಾಲೇಜುಗಳೆಲ್ಲಾ ರಜೆ, ಅದು ನಾನು ಹಿಂದೆಂದೂ ಹೆಸರೇ ಕೇಳಿರದ
ಒಬ್ಬ ವ್ಯಕ್ತಿ ತೀರಿಕೊಂಡಿದ್ದಾರೆ ಎಂದು. ಇದೆಂತಹ ಹತಾಶ ಪರಿಸ್ಥಿತಿ.
ನಾಳೆ ಇದ್ದ ಮೀಟಿಂಗ್ ಶೆಡ್ಯೂಲ್ ಎಲ್ಲಾ ಬದಲಾಗುತ್ತೆ ಎಂದು ಟ್ವೀಟ್
ಮಾಡಿದ್ದಾರೆ. https://twitter.com/monikamanchanda/status/1087306691824230400

ಇನ್ನು ಆಕೆ ಇರುವುದು ಬೆಂಗಳೂರು ದಕ್ಷಿಣದಲ್ಲಿ. ಶ್ರೀಗಳ ಬಗ್ಗೆ ಆಕೆ ನಾನು
ಹೆಸರು ಕೂಡಾ ಕೇಳದವರು ನಿಧನರಾದರೆ ರಜೆ ಕೊಡಬೇಕಾ ಎಂದು
ವ್ಯಂಗ್ಯವಾಡಿದ್ದಾರೆ. ಸಿದ್ಧಗಂಗಾ ಶ್ರೀಗಳು ಅದೆಷ್ಟೋ ಲಕ್ಷ ಜನರ ಜೀವನ
ಕಟ್ಟಿ ಕೊಟ್ಟ ಮಹಾತ್ಮರು ಎಂದೆನಿಸಿಕೊಂಡಿದ್ದಾರೆ. ಈ ಬಗ್ಗೆ ತಿಳಿಯುವ

ಸೌಜನ್ಯ ಕೂಡ ಇಲ್ಲದೆ ಆಕೆ ಮಾತನಾಡಿರುವುದು ಇದೀಗ
ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

Click to comment

Trending

Exit mobile version