ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಬರೋಬ್ಬರಿ 400 ಚಿತ್ರಮಂದಿರಗಳಲ್ಲಿ ತೆರೆಗೆಬರ್ತಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜಾಗ್ವಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿ ನಿಖಿಲ್, ಇದೀಗ ಸೀತಾರಾಮ್ ಕಲ್ಯಾಣ ಚಿತ್ರ ಎರಡನೇಯದಾಗಿದೆ. ಈ ಚಿತ್ರ ಮೂರು ವರ್ಷದ ಹಿಂದೆ ತೆರೆಕಂಡಿದ್ದು, ಈಗ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ನಲ್ಲಿ ‘ಸೀತಾರಾಮ’ ಹೇಗಿರಲಿದ್ದಾನೆ ಎನ್ನುವ ಚಿಕ್ಕ ಝಲಕ್ ನಿರ್ದೇಶಕ ಎ. ಹರ್ಷ ಬಿಟ್ಟುಕೊಟ್ಟಿದ್ದಾರೆ. ಈ ಮೊದಲಿನ ಚಿತ್ರದಲ್ಲಿ ಪಕ್ಕಾ ಆ್ಯಕ್ಷನ್ ಮೆರೆದಿದ್ದ ನಿಖಿಲ್ ಈ ಬಾರಿ, ಮಾಸ್ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಹಿಡಿದು ಬಂದಿದ್ದಾರೆ. ಇಡೀ ಕುಟುಂಬವೇ ಕುಳಿತು ಸಿನಿಮಾ ನೋಡಬಹುದು, ಎಂದು ನಿಖಿಲ್ ಈ ಮೊದಲೇ ಹೇಳಿದ್ರು. ಚಿತ್ರದಲ್ಲಿ ನಿಖಿಲ್ಗೆ ಜೊತೆಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಇಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕ್ಔಟ್ ಆಗಿದೆ ಎಂಬುದು ಟ್ರೈಲರ್ ನೋಡಿದವರ ಮಾತು. ಶರತ್ ಕುಮಾರ್, ರವಿಶಂಕರ್, ಚಿಕ್ಕಣ್ಣ ಮೊದಲಾದ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.