ಸಿಂಧನೂರು:ಕೊರೊನಾ ಎಂಬ ಮಾರಣಾಂತಿಕ ವೈರಸ್ ಹರಡುವಿಕೆ ತಡೆಯಲು ಇಡೀ ದೇಶವೇ ಸ್ತಬ್ಧವಾಗಿದೆ.
ಸದ್ಯ ಈ ಕೊರೊನಾ ವೈರಸ್ ಹರಡದಂತೆ ತಡೆಯಲು ಪ್ರಧಾನಿ ಮೋದಿ ಇಡೀ ದೇಶದ ಲಾಕ್ ಡೌನ್ಗೆ ಕರೆ ಕೊಟ್ಟಿದ್ದಾರೆ.
ಆದರೆ ಈ ಲಾಕ್ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಕೆಲವು ಬೈಕ್ ಸವಾರರು ರಸ್ತೆಗಿಳಿಯುತ್ತಿದ್ದಾರೆ.ಹೀಗಾಗಿ ಇಂತಹ ಸವಾರರ ಬೈಕ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಕಾರ್ಯ ಆರಂಭಿಸಿದ್ದಾರೆ.
ಅAದ ಹಾಗೇ ಸಿಂಧನೂರಿನಲ್ಲೂ ಕೂಡ ಕೆಲವರು ಅನಗತ್ಯವಾಗಿ ರಸ್ತೆಗಳಿದಿದ್ದ ಸವಾರರ ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ನಗರ ಪೋಲಿಸ ಠಾಣೆಯ ಪಿಎಸ್ಐ ವಿಜಯ ಕೃಷ್ಣ ಸುಮಾರು 60ಬೈಕ್ಗಳನ್ನು ಹಾಗೂ ಗ್ರಾಮೀಣ ಪೋಲಿಸ ಠಾಣೆಯ ಪಿಎಸ್ಐ ರಾಘವೇಂದ್ರ 35 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.