ನಂಜನಗೂಡು: ನಂಜನಗೂಡಿನಲ್ಲಿ ಕೊರೊನಾ ನಿಯಂತ್ರಿಸಲು ತಾಲೂಕು ಆಡಳಿತ ಹೈ ಅಲರ್ಟ್ ಆಗಿದೆ.
ಸದ್ಯ ಹೋಂ ಕ್ವಾರಂಟೈನ್ನಲ್ಲಿದ್ದ ಜ್ಯುಬಿಲಿಯಂಟ್ ಕಾರ್ಖಾನೆಯ ನೌಕರರಲ್ಲಿ ಮತ್ತಷ್ಟು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಿದೆ.
ಇನ್ನು ಸ್ವತಃ ಲಾಠಿ ಹಿಡಿದು ಇಲ್ಲಿನ ತಹಶೀಲ್ದಾರ್ ಮಹೇಶ್ ಕುಮಾರ್ ರಸ್ತೆಗಿಳಿದ್ದ ವೇಳೆ ಪೆಟ್ರೋಲ್ ಬಂಕ್ವೊAದರ ಎದುರು ಜನರ ಗುಂಪು ನೋಡಿ ಸಿಟ್ಟಿಗೆದ್ದ ಘಟನೆ ಕೂಡ ನಡೆಯಿತು.
ಇದಲ್ಲದೆ, ಯಾವುದೇ ಪಾಸ್ ಹೊಂದದೆ ಪೆಟ್ರೋಲ್ ತುಂಬಿಸಿಕೊಳ್ಳಲು ಬಂದವರಿಗೆ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಗರಂ ಆಗಿ ತಿಳಿ ಹೇಳಿದರು.ಜೊತೆಗೆ ಅನಾವಶ್ಯಕ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದ ವಾಹನ ಸವಾರರಿಗೆ ಲಾಠಿ ರುಚಿ ಕೂಡ ತೋರಿಸಿದರು.
ಇದಲ್ಲದೆ, ಅನಗತ್ಯವಾಗಿ ಓಡಾಡುವವರಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳ ದವರಿಗೆ ನೀತಿ ಪಾಠದ ತಹಶೀಲ್ದಾರ್, ಮೊದಲಿನಿಂದಲೂ ನಂಜನಗೂಡು ರೆಡ್ಜೋನ್ ಎಂದು ಘೋಷಣೆಯಾಗಿದ್ದರೂ ಕ್ಯಾರೆ ಎನ್ನದ ಜನಕ್ಕೆ ಪಾಠ ಕಲಿಸುತ್ತಿದ್ದಾರೆ.
ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)