ಸಿಂಧನೂರು(ರಾಯಚೂರು):ಸಿAಧನೂರಿನಲ್ಲಿ ಹಂಪನಗೌಡ ಬಾದರ್ಲಿ ಅಭಿಮಾನಿಗಳ ಬಳಗದ ವತಿಯಿಂದ ಅನ್ನಪ್ರಸಾದ ಕಾರ್ಯಕ್ರಮದ ಮೂಲಕ ೧೧,೦೦೦ ಸಾವಿರಕ್ಕೂ ಅಧಿಕ ಜನರಿಗೆ ಆಹಾರ ವಿತರಣೆ ಮಾಡಲಾಯಿತು.
ಸದ್ಯ ಮಹಾಮಾರಿ ಕೊರೊನಾದಿಂದ ಇಡೀ ದೇಶವೇ ಲಾಕ್ಡೌನ್ ಆಗಿದ್ದು,ಇದರ ಪರಿಣಾಮ ಬಡವರು, ಕೂಲಿಕಾರ್ಮಿಕರು, ವಿಕಲಚೇತನರು,ನಿರ್ಗತಿಕರು ಊಟವಿಲ್ಲದೇ ಹಸಿವಿನಿಂದ ಬಳಸುತ್ತಿದ್ದಾರೆ.
ಇದರ ಹಿನ್ನೆಲೆಯಲ್ಲಿ ಸಿಂಧನೂರಿನ ಹಂಪನಗೌಡ ಬಾದರ್ಲಿ ಅಭಿಮಾನಿಗಳ ಬಳಗದ ವತಿಯಿಂದ ಬಡವರು, ಕೂಲಿಕಾರ್ಮಿಕರು, ವಿಕಲಚೇತನರು,ನಿರ್ಗತಿಕರಿಗೆ ಸೇವೆ ಸಲ್ಲಿಸಲು ಮುಂದಾಗಿದೆ.
ಇನ್ನು ಈ ಅನ್ನ ಪ್ರಸಾದ ಕಾರ್ಯಕ್ರಮದ ಮೂಲಕ ನಗರದಾದ್ಯಂತ ಸುಮಾರು ೧೧೦೦೦ ಸಾವಿರಕ್ಕೂ ಅಧಿಕ ಜನರಿಗೆ ಆಹಾರ ವ್ಯವಸ್ಥೆ ಮಾಡುವ ಜನರ ಮೆಚ್ಚುಗೆಗಳಿಸಿದ್ದಾರೆ.
ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)