ಆರೋಗ್ಯ / HEALTH

ಕಾರ್ಮಿಕರ ಶೆಡ್‌ಗೆ ಬಂದ ಸಚಿವ ಸುರೇಶ್ ಕುಮಾರ್..

Published

on

ಆನೇಕಲ್(ಬೆಂ.ನಗರ): ಹೊರ ರಾಜ್ಯದ ಕಾರ್ಮಿಕರ ಶೆಡ್‌ಗಳಿಗೆ ಶಿಕ್ಷಣ ಸಚಿವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದ್ದಾರೆ.
ಅಂದ ಹಾಗೇ ಆನೇಕಲ್ ತಾಲೂಕಿನ ಬಿದರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಂಡ್ಲು ಬೆಲೆಯ ಕಾರ್ಮಿಕರ ಶೆಡ್‌ಗಳಿಗೆ ಇಂದು ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದರು.ಈ ವೇಳೆ ಸಚಿವರಿಗೆ ಸ್ಥಳೀಯ ಅಧಿಕಾರಿಗಳು ಸಾಥ್ ನೀಡಿದರು.
ಇನ್ನು ಎಲ್ಲಾ ಕಾರ್ಮಿಕರ ಯೋಗಕ್ಷೇಮ ಕಾಪಾಡುವುದು ನಮ್ಮ ಹಕ್ಕು.ಜೊತೆಗೆ ರಾಜ್ಯ ಸರ್ಕಾರ ನಿಮ್ಮ ಜೊತೆಗಿದೆ.ಯಾರು ಭಯಪಡುವ ಅವಶ್ಯಕತೆ ಇಲ್ಲ ಎಂದ ಅವರು, ಕಾರ್ಮಿಕರಿಗೆ ಈಗಾಗಲೇ ಸರ್ಕಾರದಿಂದ ಆಹಾರ ಪದಾರ್ಥ ಹಾಗೂ ಕಿಟ್‌ಗಳನ್ನು ನೀಡಿರುವ ಬಗ್ಗೆ ಕಾರ್ಮಿಕರಿಂದ ಮಾಹಿತಿ ಪಡೆದರು.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Click to comment

Trending

Exit mobile version