ತುಮಕೂರು: ಜಿಲ್ಲಾಡಳಿತ ಪತ್ರಕರ್ತರಿಗಾಗಿ ಇಲ್ಲಿನ ಪತ್ರಿಕಾ ಭವನದಲ್ಲಿ ಕೋವಿಡ್-೧೯ ಪರೀಕ್ಷಾ ಶಿಬಿರ ಆಯೋಜಿಸಲಾಗಿತ್ತು.
ಅಂದ ಹಾಗೇ ಕೊನೆಯ ದಿನದಂದು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ವರ್ಗವು ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಪತ್ರಕರ್ತರ ಗಂಟಲ ಮತ್ತು ಮೂಗಿನ ದ್ರವವನ್ನು ಯಶಸ್ವಿಯಾಗಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾಕ್ಟರ್ ಎಂ ವೀರಭದ್ರಯ್ಯ, ತುಮಕೂರು ಜಿಲ್ಲಾ ಡಿಎಚ್ಒ ಡಾ. ಚಂದ್ರಿಕಾ ಉಪಸ್ಥಿತರಿದ್ದರು.
ಇನ್ನು ಶಿಬಿರದಲ್ಲಿ ತುಮಕೂರು ನಗರದ ಪತ್ರಕರ್ತರು ಭಾಗವಹಿಸಿದ್ದರು.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ತುಮಕೂರು