ಕೆ.ಆರ್.ಪುರಂ(ಬೆ0.ನಗರ):ಎಲ್ಲೆಡೆ ವ್ಯಾಪಕವಾಗಿ ಹರುಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಘೋಷಿಸಿರುವ ಲಾಕ್ಡೌನ್ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು,ಅಗತ್ಯ ವಸ್ತುಗಳನ್ನು ನಾವು ನಿಮಗೆ ತಲುಪಿಸುತ್ತೇವೆ ಎಂದು ಶಾಸಕ ಅರವಿಂದ ಲಿಂಬಾವಳಿ ಮನವಿ ಕ್ಷೇತ್ರದ ಜನತೆಗೆ ಮಾಡಿದರು.
ಕ್ಷೇತ್ರದ ಮಾರತ್ತಹಳ್ಳಿ ವಾರ್ಡಿನ ವಿವಿಧೆಡೆಕೂಲಿ ಕಾರ್ಮಿಕರಿಗೆ ದಿನಸಿ ಸಾಮಗ್ರಿ ಹಾಗೂ ತರಕಾರಿ, ಆಹಾರ ಪ್ಯಾಕೆಟ್ಗಳನ್ನ ವಿತರಿಸಿ ಮಾತನಾಡಿದರು.
ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹೋಗಲಾಡಿಸಲು ಜನರ ಆರೋಗ್ಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಿಸಿದ್ದಾರೆ. ಲಾಕ್ಡೌನ್ ನಿಯಮಗಳನ್ನು ಪಾಲಿಸಿದಾಗ ಮಾತ್ರ ಸೋಂಕು ತಡೆಯಲು ಸಾಧ್ಯವಾಗುತ್ತದೆ.ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನಿರ್ಗತಿಕರಿಗೆ ಲಾಕ್ಡೌನ್ ಪ್ರಾರಂಭದಿAದಲೂ ದಿನಸಿ,ತರಕಾರಿ, ಆಹಾರ ಪ್ಯಾಕೆಟ್ಗಳ ಜೊತೆಗೆ ಸ್ಯಾನಿಟೈಸರ್,ಮಾಸ್ಕ್ ವಿತರಣೆ ಮಾಡಲಾಗುತ್ತದೆ. ಕ್ಷೇತ್ರದ ಎಲ್ಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಡವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಪಾಲಿಕೆ ಸದಸ್ಯ ಎನ್. ರಮೇಶ್ ಮಾತನಾಡಿ,ಲಾಕ್ಡೌನ್ ಪ್ರಾರಂಭದಿAದಲೂ ಬಡವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುತ್ತಿದೇವೆ, ಸಾರ್ವಜನಿಕರು ಅನಗತ್ಯವಾಗಿ ಗುಂಪು ಗುಂಪಾಗಿ ಓಡಾಡಬಾರದು.ಲಾಕ್ಡೌನ್ ಮುಗಿಯುವವರೆಗೂ ಮನೆಯಲ್ಲೇ ಇದ್ದು ಸಹಕರಿಸಿ ಎಂದು ವಿನಂತಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಾಕಾರಿಣಿ ಸದಸ್ಯ ಜಯಚಂದ್ರರೆಡ್ಡಿ, ಕ್ಷೇತ್ರದ ಅಧ್ಯಕ್ಷ ಮನೋಹರರೆಡ್ಡಿ, ಜಯರಾಮ್ ರೆಡ್ಡಿ, ಯೋಗನಂದ ಬಾಬು, ಯಮಲೂರು ಲೋಕಿ ಮುಂತಾದವರು ಇದ್ದರು.
ವರದಿ: ಕೆ.ಮಂಜುನಾಥ್, ಕೆ.ಆರ್.ಪುರಂ, ಬೆಂಗಳೂರು, ಎಕ್ಸ್ ಪ್ರೆಸ್ ಟಿವಿ