ಆರೋಗ್ಯ / HEALTH

ಈ ಸ್ವಾಮಿಯದ್ದು ಬೆಳಿಗ್ಗೆ ಪುರಾಣ.. ರಾತ್ರಿಯಾದ್ರೆ ಬೆತ್ತಲೆ ದರ್ಶನ..

Published

on

ಹುಬ್ಬಳ್ಳಿ :ಕುಡಿದ ಮತ್ತಿನಲ್ಲಿ ಸ್ವಾಮೀಜಿಯಿಬ್ಬರು ಬೆತ್ತಲಾಗಿರುವ ಘಟನೆ ಕುಸಗಲ್ ರಸ್ತೆಯ ಸಿದ್ಧಾರೂಢ ಆಶ್ರಮದಲ್ಲಿ ನಡೆದಿದೆ.
ದೇಶದಾದ್ಯಂತ ಲಾಕ್ ಡೌನ್ ಆಗಿತ್ತು. ಆದ್ರೆ ಮೂರನೇ ಲಾಕ್ ಡೌನ್ ನಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದೆ ತಡ ಸ್ವಾಮೀಜಿಯೊಬ್ಬರು ಕಂಠಪೂರ್ತಿ ಕುಡಿದು ಬೆತ್ತಲಾಗಿ ಮಲಗಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಮೋಹನ್ ಗುರು ಸ್ವಾಮೀಜಿ ಎಂಬುವವರೇ ಬೆತ್ತಲಾಗಿರುವ ಸ್ವಾಮೀಜಿಯಾಗಿದ್ದಾರೆ.ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನಾಗಿರುವ ಇವರು ಲಾಕ್ ಡೌನ್ ಒಪನ್ ಆಗುತ್ತಿದಂತೆ ಕಂಠಪೂರ್ತಿ ಕುಡಿದು ಕುಸಗಲ್ ರಸ್ತೆಯ ಸಿದ್ಧಾರೂಢ ಆಶ್ರಮದಲ್ಲಿ ಬೆತ್ತಲಾಗು ಸಿಕ್ಕಿಬಿದಿದ್ದಾನೆ.
ಈ ಮೋಹನ್ ಗುರುಸ್ವಾಮಿ ಪ್ರತಿ ವರ್ಷ ನೂರಾರು ಜನರಿಗೆ ಅಯ್ಯಪರಪ ಮಾಲಾ ದೀಕ್ಷೆ ನೀಡಿ, ಅಂಬಾರಿ ಮೆರವಣಿಗೆ ಮಾಡುತ್ತಿದ್ದ. ಆದ್ರೆ ರಾತ್ರಿಯಾಗುತ್ತಿದಂತೆ ಕುಡಿಯುವ ಚಟ ಇಟ್ಟುಕೊಂಡಿದ್ದ. ಆದ್ರೆ ಲಾಕ್ ಡೌನ್ ಒಪನ್ ಆಗಿದೆ ತಡ ಕಂಠಪೂರ್ತಿ ಕುಡಿದು ತನ್ನ ಮಾನ ತಾನೇ ಹರಾಜು ಹಾಕಿಕೊಂಡಿದ್ದಾನೆ.

ರಾಜು ಮುದ್ಗಾಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version