ಸಿಂಧನೂರು(ರಾಯಚೂರು):ಇದು ಹೇಳಿ ಕೇಳಿ ಮೊದಲೇ ಬರದ ನಾಡು..ಜೊತೆಗೆ ಬಿರು ಬಿಸಿಲಿನ ಪ್ರದೇಶ ಕೂಡ..
ಸದ್ಯ ಇಂಥಾ ಬಿಸಿಲಿನ ಪ್ರದೇಶದಲ್ಲಿ ಬೇಸಿಗೆ ಬಂತೆAದರೆ ಕುಡಿಯುವ ನೀರಿಗೆ ಇನ್ನಿಲ್ಲದ ಹಾಹಾಕಾರ ಆರಂಭಗೊಳ್ಳುತ್ತದೆ.
ಅAದ ಹಾಗೇ ಈ ಬಾರಿಯೂ ಕೂಡ ಕುಡಿಯುವ ನೀರಿಗೆ ಹಾಹಾಕಾರ ತಲೆ ದೋರಿದ್ದು,ಎಂದಿನAತೆ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ದಿವ್ಯ ನಿರ್ಲಕ್ಷö್ಯವಹಿಸುವುದು ಮುಂದುವರೆದಿದೆ.
ಇನ್ನು ಸಿಂಧನೂರು ತಾಲೂಕಿನ ಅಯ್ಯನೂರು,ಚಿರತನಾಳ್ಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ಹೀಗಾಗಿ ಈ ಗ್ರಾಮಗಳಲ್ಲಿ ಮಕ್ಕಳು,ಗರ್ಭಿಣಿಯರು ಸೇರಿದಂತೆ ವೃದ್ಧರು ಕೈ ಗಾಡಿಗಳ ಮೂಲಕ ಹಾಗೂ ಬಿಂದಿಗೆ ತಲೆ ಮೇಲೆ ಹೊತ್ತು ಕುಡಿಯುವ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ.
ಇದೇ ವೇಳೆ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕಾದ ಪಿಡಿಓ ಬಸವರಾಜ ಸುಡ್ಡಿ ಮಾತ್ರ ಕೊರೊನಾ ವೈರಸ್ ನೆಪ ಹೇಳಿ ತನ್ನ ಕರ್ತವ್ಯದಿಂದ ನುಣುಚಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ. ಅದರಲ್ಲೂ ಈತ ಸಬೂಬು ಹೇಳುವುದರಲ್ಲಿ ನಿಸ್ಸೀಮ ಎನ್ನುವುದು ಈ ಭಾಗದಲ್ಲಿ ಕೇಳಿ ಬರುವ ಆರೋಪವಾಗಿದೆ.
ಒಟ್ನಲ್ಲಿ ಕುಡಿಯುವ ನೀರನ್ನು ಒದಗಿಸುವಲ್ಲಿ ನಿರ್ಲಕ್ಷಿಸಿದ ಪಿಡಿಓ ಬಸವರಾಜ ಸುಡ್ಡಿ ಮೇಲೆ ತಾಲೂಕು ಪಂಚಾಯತ್ ಇಓ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾದಗಿದೆ.
ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)