ಹುಬ್ಬಳ್ಳಿ: ವಿಶ್ವ ತಾಯಂದಿರ ದಿನದ ಅಂಗವಾಗ ಹುಬ್ಬಳ್ಳಿಯಲ್ಲಿ ಮಹಿಳೆಯರು ತಮ್ಮ ತಾಯಂದಿರ ಪಾದಗಳಿಗೆ ನಮಸ್ಕರಿಸುವ ಹಾಗೂ ಕೆಕ್ ಕತ್ತರಿಸುವ ಮೂಲಕ ವಿಶೇಷವಾಗಿ ಆಚರಿಸಿದರು.
ಇಲ್ಲಿನ ಕೇಶ್ವಾಪೂರದ ಅನ್ವೇಕರ್ ಕುಟುಂಬಸ್ಥರು ವಿಶ್ವ ಅಮ್ಮಂದಿರ ದಿನಾಚರಣೆಯನ್ನು ತಮ್ಮ ಮನೆಯಲ್ಲಿ ವಿಶೇಷವಾಗಿ ಆಚರಿಸಿದರು. ನಂತರ ಮಾತನಾಡಿದ ಸೃಷ್ಟಿ ಇನ್ಪೋಟೆಕ್ ಡೈರೆಕ್ಟರ್ ಅಶ್ವಿನಿ ಅನ್ವೇಕರ್ ಅಮ್ಮನ ದಿನ ಏನ್ನುದವುದಕ್ಕೆ ಏನೋ ಹರ್ಷ.ಎಲ್ಲ ದಿನವನ್ನು ತಾಯಂದಿರು ದಿನವನ್ನಾಗಿ ಆಚರಿಸಬೇಕು.ಸೃಷ್ಟಿ ಅದ್ಬುತವೇ ತಾಯಿ,ತಾಯಿಯ ಪ್ರೀತಿಗೆ ಬೆಲೆ ಕಟ್ಟಲಾಗದು.ಎಲ್ಲರೂ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.ಅಂದರೆ ಮಾತ್ರ ಅಮ್ಮನ ಋಣ ತೀರಿಸಲು ಸಾಧ್ಯ.ಮಕ್ಕಳ ಖುಷಿಯಲ್ಲೇ ಜಗತ್ತು ಕಾಣುವ ಅಮ್ಮ ನಮ್ಮ ಕಣ್ಣಿಗೆ ಕಾಣುವ ದೇವರು ಅವಳು ಅವಳ ಪ್ರೀತಿ ವಿಶ್ವಾಸ ಪಡೆದ ನಾವೆಲ್ಲರೂ ಧನ್ಯರು ಎಂದರು.
ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ